Posts

Showing posts from April, 2018
 ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
Image
ಕೊರೆವ ಚಳಿ ಮೈ ಕೊರೆವಾಗ ಸಿಗುವ ಮುದವೆ ಬೇರೆ. ಮನೆಯಲ್ಲಿ ಇರಬೇಕಿತ್ತು... ಸಂಜೆ ಸಂಡಿಗೆ  ಮೆಣಸು ಕಚ್ಚಿಕೊಂಡು ಹಾಗೆ ನಡುಗುತ್ತಾ ಮೊಸರು ಅನ್ನಾ ತಿನ್ನುತ್ತಾ ಬಿಸಿ ನೀರು ಕುಡಿಯುತ್ತಿದ್ದರೆ ಸ್ವರ್ಗಕ್ಕೆ ಕಿಚ್ಚು. ತುದಿ ಕೈಲಿ ಕೈ ತೊಳೆದು ಯಾವಾಗ ಹಾಸಿಗೆಯೆಂಬ ಗುಹೆ ಸೇರುವೆನೊ ಎಂಬ ತವಕ. ಹಂಡೆ ತುಂಬಾ ಬಿಸಿ ನೀರಿದ್ದರೆ ಮಾತ್ರ ನೀರೆಂದರೆ ತುಸು ಜಾಸ್ತಿ ಪ್ರೀತಿ. ಅಮ್ಮ ಹಾಸಿಗೆ ಹಾಸಿ ಕರೆಯಲಿ ಎಂಬ ಮೊಂಡು ಬಯಕೆ. ಅಲ್ಲಿಯವರೆಗು ಅಡಿಕೆ ಬೇಯಿಸುವ ಒಲೆಯೆ ಸಂಗಾತಿ. ಅಪ್ಪಾ ಅಡಿಕೆ ಮಗೆಯುತ್ತಿದ್ದರೆ ಹುರಿದ ಶೇಂಗಾ ಬೆಂಕಿಯನ್ನು ಜೀವಂತ ಇಡುತ್ತಿತ್ತು. ಒಂದು ಕಿವಿ ಸದಾ ಅಮ್ಮನ ಕರೆಗೆ ಕಾಯುತ್ತಿರುತ್ತಿತ್ತು. ಕರೆದಾಕ್ಷಣ ಒಂದೆ ನೆಗೆತಕ್ಕೆ ಹಾರಿ ಮುಸುಕಲು ಎಳೆದುಕೊಂಡು ಮಲಗಿದರೆ ಬೆಳಗ್ಗೆ ಅಪ್ಪನ ತಂಡಿ ಕೈ ಕೆನ್ನೆ ಹಿಂಡಿದಾಗಲೇ ಬೆಳಗಾಗಿದ್ದು ತಿಳಿವುದು. ನಡುಗವ ಮೊಗ ನೋಡಿ ಮತ್ತೆರಡು ಕಂಬಳಿ ಹೊದಿಸಿ ಹೋದರೆ, ಎತ್ತಿ ಏಳಿಸಲು ಅವರ್ಯಾರಾದರು ಬರಲೇ ಬೇಕು. ಅಷ್ಟು ಭಾರ! ಬೆಚ್ಚಗೆ.. ನಾ ಕನಸಲ್ಲಿ ಒಮ್ಮೆ ಹೋಗಿ ಬರುವೆ...😍😘 ಮುಂಜಾನೆ ಮುಸುಕು ಹೊದ್ದು ಮಲಗುವ ಮುಗ್ದ ಮನಗಳಿಗೆ ನೆನಪಿನ ಕಚಗುಳಿ 
Image
ಭಯ ಇರಬೇಕು ಭಯ ಇರಬೇಕು ನನಗೆ ನಿನ್ನ ಮೇಲೆ ನಿನಗೆ ನನ್ನ ಮೇಲೆ ಅದೆಷ್ಟೆಂದರೆ, ಕಣ್ಣು ರೆಪ್ಪೆಗೆ ಆತು ಕುಳಿತು  ಉಸಿರಿಗೆ ಉಸಿರು ಬೆರೆಸಿ ಕಣ್ಣಾಲಿಗು ತಪ್ಪದಂತೆ ಕಾದು ಕೂರ ಬೇಕು' 'ನೀ ಕಣ್ಣಲ್ಲೇ ಬರವ ಕವನಗಳ ನಾನೋದುವಾಗ ಮುಂಗುರುಳ ನೀ ಎಣಿಸಬೇಕು ನಿನ್ನ ಕಂಗಳ ಉತ್ತರವ ನನ್ನಾಲೆಗಳಲಿ ಹುಡುಕುವಾಗ ಕಣ್ಣು ಮುಚ್ಚಿ ನಾ ಕಾಡ ಬೇಕು' 'ಮುಚ್ಚಿದ ಕಣ್ಗಳು ಪದ ಕಮಲದಂತೆ ಕಾಡಿವೆ ಅದರಗಳ ಕಚಗುಳಿಯನಿಡಲು ಹಾಗೆಯೇ ಇರು ತುಸು ಕೆಂಪು ಮಾಡುವೆ ನಿನ್ನ ಕಾಡಿಗೆಯ ಬಣ್ಣ' ' ಈ ಆಲೆಗಳಲಿ ನೀನೇ ಅವಿತಿರುವಾಗ ಆಗಲೇ ರಂಗೇರಿದೆ, ಮತ್ತಿನ್ನೇನು ಸುಮ್ಮನೆ ಕಾಡಬೇಡ, ನೋಡು ಆಚೆ' 'ಹುಸಿ ಮುನಿಸಿಗೆ, ಸಿಂಗಾರಿ ನೀನು ನಿನ್ನೆದುರು ಅಸ್ತಮಿಪ ಸೂರ್ಯನಿಗೂ ಮುಪ್ಪು ಒಮ್ಮೆ ತಲೆ ಎತ್ತಿ ನೋಡು, ಜೀವನ ಪಾವನ' 'ಹುಚ್ಚು ನಿನಗೆ, ಈ ಹೃದಯ ತಾಳ ತಪ್ಪಿದರೆ, ನನಗಾರು ಗತಿ, ಬಿಡಲಾರೆ ನಾನು' 'ಉಸಿರೇ ಕಟ್ಟಿದೆ, ಇನ್ನು ತಾಳ ತಪ್ಪಲೆಷ್ಟು,' ' ನುಡಿಯದಿರು ಅಪಶಕುನ, ಮುಸ್ಸಂಜೆ ವೇಳೆ, ಆ ತಾಳಕ್ಕೆ ಬಂದಿಯಾದ ಸ್ವರ ನಾನು ಮರೆಯದಿರು' ಸೂರ್ಯ ಕೆಂಪಾದ ಮತ್ತಷ್ಟು.... - ರಾಧೆ...
Image
 ಸುಪ್ತ ಮನಸಿನ ಕನವರಿಕೆಗಳು  ಅಮ್ಮ ಇನ್ನೂ ನಾಲ್ಕು ದಿನ ಹಾಯಾಗಿ ಇರಬಹುದು ನೋಡು, ಅಮ್ಮ ಕೊಟ್ಟ ಕಾಫಿ ಹಿಡಿದು ವರಾಂಡದಲ್ಲಿ ಕಾಲು ಚಾಚಿ ಕುಳಿತೆ. 'ಹಾ' ಎನ್ನುತ್ತಾ ಕೆಲಸದಲ್ಲಿ ಮಗ್ನಳಾದಳು. ಅಣ್ಣ, 'ಏನು ಅರಾಮ, ನಿನ್ನ ಮದುವೆ ಇದೆ, ಮರ್ತೋಯ್ತಾ??. ' 'ಹೌದೌದು! ಮದ್ವೆ... ಮಕ್ಕಳಾಗೋದಲ್ವಾ.' ' ಹೆಯ್ not kidding, we are serious!! ' 'ಏನು? ನಂಗೆ ಮದ್ವೆನಾ? ಹುಡುಗ ಯಾರು? ' 'ಅಪ್ಪಾ ಹತ್ರ ವಿಚಾರಸು'. ' ಸುಮ್ನೆ ಹೇಳೊ, ಯಾಕೆ ತಲೆ ತಿಂತಿಯಾ?'. 'ನಿಜಾ ಅಪ್ಪಂಗೆ ಕೇಳು.ನಂಗೇನು ಗೊತ್ತಿಲ್ಲಾ..' ಅಷ್ಟರಲ್ಲಿ ಅಲ್ಲಿಗೆ ಅಪ್ಪ ಬಂದರು. 'ಅಪ್ಪಾ ಏನಿದೆಲ್ಲಾ? '. ' ನಿನ್ನ ಮದುವೆ ತಯಾರಿ' 'ಎಲ್ಲಾ ಯಾಕೆ ಈ ತರ ಜೋಕ್ ಮಾಡ್ತಿದಿರಾ?' 'ಹುಡುಗಾ ಯಾರು?!! ' 'ಅಣ್ಣ ಫೋಟೋ ತೋರ್ಸೊ' ಎಂದು ಅಪ್ಪ ಬೇರೆಲ್ಲೋ ಹೋದ. ನಂಗೆ ಸಿಟ್ಟು ಬಂತು. ಏನ ಬೇಕಾದ್ರು ಮಾಡ್ಕೋಳ್ಳಿ, ಎಂದು, ಎದ್ದು ಹೋಗಿ ಮಲಗಿದೆ. ಯಾಕೆ ಸುಮ್ಮನೆ ತಲೆ ತಿಂತಾರೊ ಎಲ್ಲಾ..‌ ನಾನಂತು ಮಲಗುವೆ ಎಂದು ಮಲಗಿದೆ. ಅದೆಷ್ಟು ಸುದೀರ್ಘ ನಿದ್ದೆ, ಯಾರು ಎಚ್ಚರಿಸಲು ಇಲ್ಲಾ, ಏನಾಗಿದೆ ಎಲ್ಲರಿಗೂ.. ಊಟಾ ಆಯ್ತು. ನನ್ನ ಫ್ರೆಂಡ್ ಗೆ call ಮಾಡಿದೆ, ನೊ ಸಿಗ್ನಲ್... ' ನಿನ್ನ ಸಾರಿ ಐರನ್ ಮಾಡ್ಕೋ' 'ಯಾವುದು?'. ...
Image
(ಸಾಂದರ್ಭಿಕ ಚಿತ್ರ ) ವಾಸ್ತವಕ್ಕೆ ಹತ್ತಿರವಾದ ಕಥೆ: ಅಮ್ಮ ತಿಂಡಿ ತಯಾರಿಸಿ, ಮೆಲುವಾಗಿ ಕರೆದಳು. ನಾನು ಬಾರಿ ಬಾರಿಗು ಸಿಹಿನಿದ್ದೆಗೆ ಜಾರುತ್ತಿದ್ದೆ. ಪ್ರತಿ ಸಲ ಎಚ್ಚರವಾದಾಗಲು ಈಗಷ್ಟೇ ಮಲಗುತ್ತಿರುವಂತೆ ಯಾವುದೇ ಹಿಂಸೆ ಇಲ್ಲದೆ ನಿದ್ದೆ ಬರುವುದು. ಅಲ್ಲಿಯ ಜಾಗದ ಮಹಿಮೆಯೇ ಸರಿ. ಅಮ್ಮ ಕರೆದುದ್ದಕ್ಕೆ ಚಾದರ ಹೊದ್ದೆ ಎದ್ದು ಕುಳಿತೆ. 'ಏಳೆ ಬಂಗಾರಿ' ಎಂದು ಲೈಟ್ ಹೊತ್ತಿಸಿ, ಕೆನ್ನೆಗೆ ಮುದ್ದಿಸಿದಳು. ಇನ್ನೆಂತ ಬೆಳಗು ಬೇಕು.. ಅವಳ ಕತ್ತಿಗೆ ಜೋತು ಬಿದ್ದು ಎದ್ದು ಬಂದೆ. ಬ್ರಷ್ ಹಿಡಿದು ಸೂರ್ಯ ಎಲ್ಲಾದರು ಕೃಪೆ ತೋರಿದ್ದಾನಾ ಎಂದು ಇಣುಕಿದೆ. ಅಂಗಳದ ತುತ್ತುದಿಯಲ್ಲಿ ಸ್ವಲ್ಪ ರಂಗು ಚೆಲ್ಲಿದ್ದ. ಅರಾಮಾಗಿ ಬಿದ್ದಿದ್ದ ಮೊಬೈಲ್ ಹಿಡಿದು ಅಡಿಕೆ ರಾಶಿಯ ಮೇಲೆ ನಡೆಯುತ್ತ ಎಳೆಬಿಸಿಲಲ್ಲಿ ಕುಳಿತೆ. ಮೊಬೈಲ್ ಅಲ್ಲೆ ಅಡಿಕೆ ರಾಶಿಯ ಮೇಲೆ ಇಟ್ಟು, ಹಲ್ಲುಜ್ಜುತ್ತಾ, ಅಯ್ಯೋ ಇನ್ನೆರಡೆ ದಿನ, ಯಾವ ಸ್ವಾರ್ಥಕ್ಕೆ ಆ ಮಾಯಾ ನಗರಿಯೋ, ಹಾಳಾದ ಜೀವನ. ಇಲ್ಲೇ ದನಮೇಯಿಸಿಕೊಂಡು ಇದ್ದರು ಎಷ್ಟು ಚೆಂದ ಎಂದು ನನ್ನ ಪ್ರೀತಿಯ ಗುಡ್ಡ-ಬೆಟ್ಟ ನೋಡುತ್ತ ಕೂತಿದ್ದೆ. ಅಮ್ಮ ಮತ್ತೆ ಕರೆದಳು, 'ದೋಸೆ ಕಾವಲಿ ಇಟ್ಟೆ, ರಂಗೋಲಿ ಹಾಕಿ ಬಾ'. ವಾಸ್ತವಕ್ಕೆ ಬಂದೆ. 'ಹಾ ಬಂದೆ' ಎಂದು ಅಡಿಕೆ ರಾಶಿ ಮೇಲೆ ಕುಣಿಯುತ್ತಾ ಒಳ ಸೇರಿದೆ. ಅಮ್ಮ ಬಾಗಿಲಲ್ಲೇ ರಂಗೋಲಿ ಬಟ್ಟಲಿಟ್ಟಿದ್ದಳು. ಮೊದಲ ಹಾಗೆ ಪಟ್ಟಿ ನೋಡಿ ಚುಕ್ಕೆ ಇಟ್ಟು...