ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
- Get link
- X
- Other Apps
(ಸಾಂದರ್ಭಿಕ ಚಿತ್ರ )
ವಾಸ್ತವಕ್ಕೆ ಹತ್ತಿರವಾದ ಕಥೆ:
ಅಮ್ಮ ತಿಂಡಿ ತಯಾರಿಸಿ, ಮೆಲುವಾಗಿ ಕರೆದಳು. ನಾನು ಬಾರಿ ಬಾರಿಗು ಸಿಹಿನಿದ್ದೆಗೆ ಜಾರುತ್ತಿದ್ದೆ. ಪ್ರತಿ ಸಲ ಎಚ್ಚರವಾದಾಗಲು ಈಗಷ್ಟೇ ಮಲಗುತ್ತಿರುವಂತೆ ಯಾವುದೇ ಹಿಂಸೆ ಇಲ್ಲದೆ ನಿದ್ದೆ ಬರುವುದು. ಅಲ್ಲಿಯ ಜಾಗದ ಮಹಿಮೆಯೇ ಸರಿ. ಅಮ್ಮ ಕರೆದುದ್ದಕ್ಕೆ ಚಾದರ ಹೊದ್ದೆ ಎದ್ದು ಕುಳಿತೆ. 'ಏಳೆ ಬಂಗಾರಿ' ಎಂದು ಲೈಟ್ ಹೊತ್ತಿಸಿ, ಕೆನ್ನೆಗೆ ಮುದ್ದಿಸಿದಳು. ಇನ್ನೆಂತ ಬೆಳಗು ಬೇಕು.. ಅವಳ ಕತ್ತಿಗೆ ಜೋತು ಬಿದ್ದು ಎದ್ದು ಬಂದೆ. ಬ್ರಷ್ ಹಿಡಿದು ಸೂರ್ಯ ಎಲ್ಲಾದರು ಕೃಪೆ ತೋರಿದ್ದಾನಾ ಎಂದು ಇಣುಕಿದೆ. ಅಂಗಳದ ತುತ್ತುದಿಯಲ್ಲಿ ಸ್ವಲ್ಪ ರಂಗು ಚೆಲ್ಲಿದ್ದ. ಅರಾಮಾಗಿ ಬಿದ್ದಿದ್ದ ಮೊಬೈಲ್ ಹಿಡಿದು ಅಡಿಕೆ ರಾಶಿಯ ಮೇಲೆ ನಡೆಯುತ್ತ ಎಳೆಬಿಸಿಲಲ್ಲಿ ಕುಳಿತೆ. ಮೊಬೈಲ್ ಅಲ್ಲೆ ಅಡಿಕೆ ರಾಶಿಯ ಮೇಲೆ ಇಟ್ಟು, ಹಲ್ಲುಜ್ಜುತ್ತಾ, ಅಯ್ಯೋ ಇನ್ನೆರಡೆ ದಿನ, ಯಾವ ಸ್ವಾರ್ಥಕ್ಕೆ ಆ ಮಾಯಾ ನಗರಿಯೋ, ಹಾಳಾದ ಜೀವನ. ಇಲ್ಲೇ ದನಮೇಯಿಸಿಕೊಂಡು ಇದ್ದರು ಎಷ್ಟು ಚೆಂದ ಎಂದು ನನ್ನ ಪ್ರೀತಿಯ ಗುಡ್ಡ-ಬೆಟ್ಟ ನೋಡುತ್ತ ಕೂತಿದ್ದೆ. ಅಮ್ಮ ಮತ್ತೆ ಕರೆದಳು, 'ದೋಸೆ ಕಾವಲಿ ಇಟ್ಟೆ, ರಂಗೋಲಿ ಹಾಕಿ ಬಾ'. ವಾಸ್ತವಕ್ಕೆ ಬಂದೆ. 'ಹಾ ಬಂದೆ' ಎಂದು ಅಡಿಕೆ ರಾಶಿ ಮೇಲೆ ಕುಣಿಯುತ್ತಾ ಒಳ ಸೇರಿದೆ. ಅಮ್ಮ ಬಾಗಿಲಲ್ಲೇ ರಂಗೋಲಿ ಬಟ್ಟಲಿಟ್ಟಿದ್ದಳು. ಮೊದಲ ಹಾಗೆ ಪಟ್ಟಿ ನೋಡಿ ಚುಕ್ಕೆ ಇಟ್ಟು ಬಿಡಿಸುವಷ್ಟು ವ್ಯವದಾನ ನನಗಿಲ್ಲ. ಈಗ ಚುಕ್ಕಿ ಇಟ್ಟಷ್ಟಕ್ಕೆ ಚಿತ್ತಾರ. ಅಮ್ಮ ಚೆನ್ನಾಗಿಯೇ ಬಿಡಿಸುವಳು. ಆದರೂ ನಾನು ಏನು ಬಿಡಿಸಿದೆ ಎಂದು ಖುಷಿಯಿಂದ ನೋಡುವಳು. ಅದರಲ್ಲೂ ಖುಷಿ ಪಡುವ ಮುದ್ದು ಜೀವ. 'ಮಗಾ ಚಟ್ನಿ ಇದೆ, ಜೇನು ತುಪ್ಪ- ತುಪ್ಪಾ ಬೇಕಾ?. ' ಗೊತ್ತವಳಿಗೆ, ಆದರೂ ಒಮ್ಮೆ ಕೇಳುವಳು. ನಾನು ದೇವರ ಒಳಗೆ ರಂಗೋಲಿ ಬಟ್ಟಲಿಟ್ಟು, ದೇವರಿಗೆ ನಮಸ್ಕರಿಸಿ, ಜೇನುತುಪ್ಪ ಎತ್ತಿಕೊಂಡು ಬಂದೆ. ಮತ್ತೇನಂದರೆ ನಮ್ಮನೆ ದೇವರು ತುಂಬಾ ಸಾದು. ಹೆಚ್ಚಾಗಿ ಏನನ್ನೂ ಕೇಳಲ್ಲಾ. ಅಷ್ಟರಲ್ಲಿ ಅಪ್ಪ ಬಂದ. 'ಇವತ್ತು ದೇವರು ಬರುತ್ತಂತೆ, ಯಾರೂ ಕೆಲಸಕ್ಕೆ ಬರಲ್ವಂತೆ. ಸಾಕಾಯ್ತು ಮಗಾ, ದಿನಾ ಅಕ್ಷತೆ ಕೊಟ್ಟು ಕೆಲಸಕ್ಕೆ ಕರ್ಕೊಂಡು ಬಂದು, ಹು ತಿಂಡಿ ಹಾಕು' ಎಂದು ಕುಳಿತರು. ನಾನು ಯಾವ ದೇವರು, ಎಲ್ಲಿ ಬರುತ್ತೆ ಎಂದು ತಿಳಿದು ಕೊಂಡೆ. ಶನಿ ದೇವರಂತೆ. ಹಾಗಾದರೆ ನಂದೆ ದೇವರು ಎಂದು ನಕ್ಕೆ. ತಿಂಡಿಯಾಯಿತು.
ನಾನು ಚಾಲಿ ಸುಲಿಯಲು ಕುಳಿತೆ. ಅಪ್ಪ ಧೂಳಾಗುತ್ತೆ, ಬೇಡ ಮಗಾ ಎಂದರು. ಹಾ ನಂಗೆ ಈಗ ಏನು ಆಗಲ್ಲಾ ಎಂದು ಕುಳಿತೆ. ಅಷ್ಟರಲ್ಲಿ ಮತ್ತೆ ೩-೪ ಜನ ಚಾಲಿ ಸುಲಿಯಲು ಬಂದರು. ಅಯ್ಯೋ ಪಾಪ ಅನ್ನಿಸಿತು. ಅಲ್ಲಿ ಕುಳಿತವರು ಒಂದೇ ಕುಟುಂಬದವರು. ಮಗಳು ಅಳಿಯನನ್ನು ಕಳಕೊಂಡು ಒಂದು ತಿಂಗಳಾಗಿರಬೇಕು. ಅಮ್ಮ ಮೊನ್ನೆ ಮೊನ್ನೆ ಫೋನ್ ಲಿ ಹೇಳಿದ ನೆನಪು.ಇಬ್ಬರು ಹೆಣ್ಣು ಮಕ್ಕಳು, ಅದೇ ಒಬ್ಬಳು ಗಂಡನನ್ನು ಕಳೆದುಕೊಂಡವಳು, ಇನ್ನೊಬ್ಬಳು ಗಂಡನನ್ನು ಬಿಟ್ಟವಳು ಎಂದು ಬಳಿಕ ತಿಳಿಯಿತು. ಗಂಡ ಸತ್ತವಳಿಗೆ ಒಂದೂವರೆ ವರ್ಷದ ಮಗಳು. ಮಗ ಬಂದಿರಲಿಲ್ಲ, ಶಾಲೆಗೆ ಹೋಗಿರುವನಂತೆ. ಆ ಮಗು ನೋಡಿದಾಗ ದೇವರೆಷ್ಟು ಕ್ರೂರಿ ಎನ್ನಿಸಿತು. ಅವಳ ಪಾಡಿಗೆ ಅವಳು ಆಡುತ್ತಿದ್ದಳು. ಆದರೆ ಅವರ್ಯಾರ ಮುಖದಲ್ಲೂ ದುಃಖದ ಛಾಯೆ ಕಂಡುಬರಲಿಲ್ಲ. ಎಷ್ಟು ಗಟ್ಟಿಗರಪ್ಪಾ ಎನ್ನಿಸಿತು. 'ಅಮ್ಮಾ ನಮ್ಮವರಿಗೆ ಯಾರಿಗಿದಾರೂ ಇಂತಹ ಪರಿಸ್ಥಿತಿ ಬಂದರೆ, ಸುಮಾರು ಒಂದು ವರ್ಷ ಅದೇ ಸೂತಕದ ಕಳೆ ಇರುತ್ತೆ, ಮಾತನಾಡಿಸಲು ಶಬ್ದಗಳ ತಕಲಾಟವಿರುತ್ತದೆ, ಆದರೆ ಇವರೆಷ್ಟು ಗಟ್ಟಿ ಅಲ್ವಾ' ಎಂದೆ. 'ಹು, ಒಂದು ವಾರಕ್ಕೆ ಇವರು ಹೀಗೆ ಇದ್ದಾರೆ' ಎಂದಳು.
' ಮತ್ತೊಬ್ಬಳು ಅಪ್ಪನ ಮನೆಗೆ ಬಂದಿದ್ದಾ?' ಕೇಳಿದೆ. 'ಇಲ್ಲಾ ಅವಳು ಗಂಡನನ್ನು ಬಿಟ್ಟಿದ್ದಾಳೆ' 'ಲವ್ ಮ್ಯಾರೇಜ್ ಅಲ್ವಾ?'
'ಹಾ ಆಗ ಬಾರದ ಅವಧಿಲಿ ಆಗಬಾರದವನ್ನ ಯಾರ ಮಾತ ಕೇಳ್ದೆ ಆದ್ಲು, ಈಗ ಹೀಗೆ'
'ಅಂದರೆ? ಮತ್ತೆ ಮಕ್ಕಳು?'
'ಅವಳ ಸ್ವಂತ ಚಿಕ್ಕಿ ಮಗನ್ನ ಮದ್ವೆ ಆದಳು. ಮಕ್ಕಳು.. ಎರಡು ಹೆಣ್ಣು ಆಗಿತ್ತು, ಒಂದು ಗಂಡನ ಜೊತೆ ಇದ್ದಾಗ್ಲೆ ಮಾರಿದಳು, ಇನ್ನೊಂದು ಗಂಡನನ್ನು ಬಿಟ್ಟ ಮೇಲೆ ಮಾರಿದಳು.'
'ಮಾರಿದಳು ಅಂದರೆ??!!!'
ಯಾರೋ ಡಾಕ್ಟರ್ ಫ್ಯಾಮಿಲಿ ದತ್ತು ತೆಗೆದುಕೊಂಡರು ಅಂತಾ ಹೇಳ್ತಾರಪ್ಪಾ.'
'ಅದ್ಯಾವ ಡಾಕ್ಟರ್ ಇರಬಹುದಪ್ಪಾ? ಅಲ್ಲಾ ಅಮ್ಮ ನಾನು ಚಿಕ್ಕವಳಿದ್ದಾಗ್ಲು ಇದೇ ಡೈಲಾಗ್ ಕೇಳಿದ್ದು. ಅದೆಷ್ಟು ಮಕ್ಕಳು ದತ್ತು ತೆಗೆದುಕೊತಾರೆ ಅವರು?!'
'ನಂಗೊತ್ತಿಲ್ಲ ಮಗಾ, ಕೆಲಸಾ ಇದೆ, ಈಗ ಆ ಕಥೆ ಬೇಡ.' ಎಂದು ಕೆಲಸಕ್ಕೆ ತೊಡಗಿದಳು. ನನ್ನ ತಲೆಯಲ್ಲಿ ಹುಳು ಬಿಟ್ಟಿತು. ಹೊರಗೆ ಬಂದೆ, 'ಅಕ್ಕಾ ಭಾವ ಸತ್ತು ತಿಂಗಳಾಯಿತು, ವಿಧವಾ ವೇತನ ಯಾವಾಗ ಬರೋದು? ಬಂದರೆ ಬೇಕಾದಂಗೆ ಸಾಕು ನೋಡು', ಎಂದವಳು ಮಾತು ಬದಲಿಸಿದಳು, ತಂಗಿ. ಅವಳ ಕತ್ತಲ್ಲಿ ತಾಳಿ ಇರಲಿಲ್ಲ. ನಾನು ಮೊದಲು ನೋಡುವಾಗ ಹೇಗಿದ್ದಳೊ ಹಾಗೆ ಇರುವಳು. ಯಾಕೋ ಮುಖ ನೋಡಲು ಅಸಹ್ಯ ಎನ್ನಿಸಿತು. ಅವಳು ಆಡುವ ಮಾತು ಕೇಳಬೇಕು. ಊರುಗೆಲ್ಲಾ ಬುದ್ದಿ ಹೇಳುವಳು. ಅವರಿಬ್ಬರೂ ದ್ವಿವಳಿ ಗಳಾಗಿರುವುದರಿಂದ ಗುರುತಿಸುವುದು ಕಷ್ಟ. ತಾಳಿ ಹಾಕಿರುವವಳು ಗಂಡ ಸತ್ತವಳು ಎಂದು ಗುರುತಿಟ್ಟುಕೊಂಡಿದ್ದೆ. ಅವರವರ ಜೀವನ ಅವರಿಗೆ, ನನಗ್ಯಾಕೆ ಎಂದು ಸುಮ್ಮನಾದೆ. ಆದರೆ ಪದೇ ಪದೇ ಬರುವ ಫೋನ್ ಕಾಲ್ ಕುತೂಹಲ ಕೆರಳಿಸಿತು. 'ಅಮ್ಮ ನಮಗ್ಯಾರಿಗು ಬರದಷ್ಟು ಕಾಲ್ ಇವಳೊಬ್ಬಳಿಗೆ ಬರತ್ತಲ್ಲಾ' ಎಂದೆ.
'ಈ ಗಂಡ ಬಿಟ್ಟವಳು ಇನ್ಯಾರನ್ನೋ ಲವ್ ಮಾಡ್ತಿದಾಳಂತೆ' ಎಂದಳು. ನಂತರ ಮಧ್ಯಾಹ್ನ ಊಟ ಮಾಡಿ ಅಕ್ಕ-ತಂಗಿ ಆಸ್ಪತ್ರೆಗೆ ಹೋಗಬೇಕು, ಮಗನಿಗೆ ತಲೆ ನೋವು ಹೇಳುತ್ತಿರುವ ಎಂದು ತರಾತುರಿಯಲ್ಲಿ ಜಾಗ ಖಾಲಿಮಾಡಿದರು. ಅವರೊಂದು ಸುಳ್ಳಿನ ಕಂತೆ. ಆಡುವ ಸಾಲುಗಳಿಗೆ ಸಂಬಂಧವೆ ಇರದು. ಮಾರನೆ ದಿನ ಅವರು ಬಂದಾಗ ಕಾಲ್ ಬಂತು. ಅಕ್ಕ ಬಿರುಬಿಸಿಲ್ಲಿ ದೂರದಲ್ಲಿ ಮಾತನಾಡುವುದು ಕಾಣುತ್ತಿತ್ತು. ತಾಯಿ ಕೂತಲ್ಲಿಂದ ಕೂಗಿದಳು, 'ರೇಟ್ ಫಿಕ್ಶ ಮಾಡ್ಸು'. ಯಾಕೋ ಕೆಟ್ಟದ್ದೆ ತಲೆಗೆ ಸುತ್ತ ತೊಡಗಿತು. ಮಧ್ಯಾಹ್ನ ಊಟ ಮುಗಿಸಿ ಕುಳಿತಿದ್ದರು. ಏನೋ ಮಕ್ಕಳು ಮರಿ ವಿಷಯ ಬಂತು. ನಾನು ಆ ತಂಗಿಗೆ ಕೇಳಿದೆ ' ನಿನಗೆ ಎಷ್ಟು ಮಕ್ಕಳು' ಎಂದು. 'ನನಗೆ ಮಕ್ಕಳಿಲ್ಲಾ' ಎಂದು ಮತ್ತೇನೊ ಕಥೆಯಲ್ಲಿ ಮುಳುಗಿದಳು. ಅಬ್ಬಾ!!! ಎನ್ನಿಸಿತು. ಹೆತ್ತವರು ಎಂದಾದರೂ ಮಕ್ಕಳಿಲ್ಲ ಎನ್ನಲು ಸಾಧ್ಯವೇ?? ನನ್ನ ಗಂಟಲು ಕಟ್ಟಿತು. ಕಷ್ಟ ಪಟ್ಟು ಆ ಪ್ರಶ್ನೆ ಕೇಳಿದ್ದೆ, ಉತ್ತರಿಸಿದರೆ, ಅವರ ಡಾಕ್ಟರ್ ಯಾರೆಂದು ಪತ್ತೆ ಹಚ್ಚ ಬಹುದೋ, ಅಥವಾ ಇನ್ನಷ್ಟು ಸುಳ್ಳು ಕಥೆ ಹೇಳಬಹುದೋ ಎಂಬ ಕಾರಣಕ್ಕೆ. ಆದರೆ ಯಾವುದೇ ಉತ್ತರ ಸಿಗಲಿಲ್ಲ. ಮತ್ತೆ ಕಾಲ್ ಬಂದಿತು. ಏನೇನೊ ಕಥೆ ಕಟ್ಟಿ ಜಾಗ ಖಾಲಿ ಮಾಡಿದರು. ಮಗನಿಗೆ 'ನಿನ್ನೆ ಡಾಕ್ಟರ್ ಹತ್ರ ತಂಗಿ ಕರೆದುಕೊಂಡು ಹೋಗಿದ್ವಲ್ಲಾ, ಅವರು ಮತ್ತೆ ಬರಹೇಳಿದ್ದಾರೆ' ಎಂದು ಪುಸಲಾಯಿಸಿ, ಅಜ್ಜಿ ಬಳಿ ಬಿಟ್ಟು, ಮಗಳನ್ನು ಎತ್ತಿಕೊಂಡು ಹೋದರು. ಕುರಿ ಕಡಿಯಲು ತೆಗೆದುಕೊಂಡು ಹೊರಟಂತೆ ಭಾಸವಾಯಿತು. ಭಾವನೆಗಳು ಸತ್ತ ಇಂತವರ ಹೊಟ್ಟೆಯಲ್ಲಿ ಹುಟ್ಟುವ ಪಾಪ ಆ ಮುಗ್ದ ಜೀವಗಳೇನು ಮಾಡಿಹೆಯೊ. ಅವರ ಮುಖದಲ್ಲಿ, ಕುತಂತ್ರ,ಕುಟಿಲತೆಯ ಹೊದ್ದು ಮುಗ್ಧತೆ ಎದ್ದು ಕಾಣುತ್ತಿತ್ತು.
ನೆನಪಾಯಿತು, ನಾನು ಇಲ್ಲದಿದ್ದಾಗ ನಮ್ಮಮನೆಯಲ್ಲಿ ನಂದಿ, ಚಿನ್ನಿಯನ್ನು (ತುಂಟ ಆಕಳ ಕರುಗಳು, ನಾ ಬೆಳೆಸಿದ್ದು) ಬೇರೆಯವರಿಗೆ ಹೊಡೆದು ಕೊಡುತ್ತಿದ್ದರು.. ನಾನಿದ್ದರೆ ಹೋಗಗೊಡೆ ಎಂದು. ಈಗಲೂ ಅವರನ್ನು ನೆನಪಿಸಿಕೊಂಡು ಮುನಿಸಿಕೊಳ್ಳುವೆ ಅಪ್ಪನ ಮೇಲೆ. ಪ್ರಥ್ವಿ ಅಗಲಿಕೆ ಈಗಲೂ ನನಗೂ ಅಮ್ಮನಿಗೂ ಕಣ್ಣೀರಿಡಿಸುವುದು. ಸಾಕು ಪ್ರಾಣಿಗಳೇ ಇಷ್ಟು ಆಪ್ತವಾಗುವಾಗ, ಕರುಳ ಸಂಬಂಧ ಅಷ್ಟು ಹಗುರಾಗುವುದೇ??!! ನನ್ನ ಹೊಕ್ಕ ಪ್ರಶ್ನೆ ಬೆಳೆಯುತ್ತಲೆ ಇದೆ... ನಿಜವಾಗಿಯೂ ಆ ಕಂದಮ್ಮಗಳು ಒಳ್ಳೆಯ ನೆಲೆ ಕಂಡಿಹವೇ? ಅಥವಾ ಇವರು ದುಡ್ಡಿಗಾಗಿ ಎಲ್ಲಿಯೋ ಮಾರಿ, ಬಂದ ದುಡ್ಡಲ್ಲಿ ಮಜ ಮಾಡುತ್ತಿರುವರೇ????
ಒಳ್ಳೆಯದನ್ನೇ ಆಶಿಸೋಣ... ಆ ಮುಗ್ಧ ನಗು ಕಣ್ಮುಂದೆ ತೇಲಿಬರುತ್ತಿದೆ.
#Humantraffickingstillexist #developing countries are more prone to it#
ರಾಧೆ ... 🎶
- Get link
- X
- Other Apps
Popular posts from this blog
ನೀವು ಓದುತ್ತಿರುವುದು AIR memory ನನಗೆ ರೇಡಿಯೋ, ನಂಟು ಬಹಳ ಹಳೆಯದು. ಒಂದು ರೀತಿಯ ಸಂಗಾತಿ, ನನ್ನ ಪ್ರಪಂಚವಾಗಿತ್ತು ಎಂದರೂ ಅತಿಶಯವಾಗದೇನೋ... ಆದರೆ ನಂಟು ತೊರೆದು ಸುಮಾರು ಹತ್ತು ವರ್ಷಗಳೇ ಕಳೆದಿದೆ, ಮತ್ತೆ ಕೆಲ ಭಾವಗೀತೆಗಳು ಆಗಾಗ ಅಲ್ಲಿ ಕೊಂಡೊಯ್ಯುತ್ತವೆ ಕ್ಷಣಕಾಲಕ್ಕೆ. ರೇಡಿಯೋ ಜೊತೆ ಕಳೆದ ನೆನಪುಗಳು ಹುಟ್ಟೂರಿನಂತೆ, ಮನಕೆ ತಂಪು, ಈ FM ಗಳನ್ನ ಕೇಳುವಾಗ ಹೋಟೆಲ್ನಲ್ಲಿ ಊಟಮಾಡಿದ ಹಾಗೆ, ಕೇಳುವಾಗ ಹಾಯ್ ಎನಿಸಿದರೂ, ಏನೋ ಅತೃಪ್ತಿ. ನಮ್ಮ ಸಂಬಂಧ ಎಲ್ಲಿಂದ ಶುರುವಾಯಿತು ಎಂದು ನೆನಪಿಲ್ಲ, ಆದರೆ ಒಂದು ಘಟನೆ ಅಮ್ಮ ಯಾವಾಗಲೂ ನೆನಪಿಸಿಕೊಂಡು ನಗುತ್ತಿರುತ್ತಾಳೆ. ಒಮ್ಮೆ ನನ್ನನ್ನ-ಅಣ್ಣನ್ನ ಮನೆಯಲ್ಲಿ ಬಿಟ್ಟು ಊರಲ್ಲಿ ಇರುವ ಪೂಜೆಗೆ ಮನೆಯವರೆಲ್ಲ ಹೋಗಿದ್ದರು. ನನಗೆ ಕುಡಿಯಲು ಕಷಾಯ ಮಾಡಿ ಹೇಳಿ ಹೋಗಿದ್ದರು. ನಾನು ಅಣ್ಣ ಸೇರಿ ಅದಕ್ಕೆ ಸ್ನಾನ ಮಾಡಿಸಿ, ಕಷಾಯ ಕುಡಿಸಿ ಮಲಗಿಸಿದ್ದೆವು. ಅಪ್ಪ ಬಂದು cricket score ಎಷ್ಟಾಯ್ತೆಂದು ರೇಡಿಯೋ ಹಚ್ಚಿದ್ದರೆ, ಅದು ಸಾಯಲು ಬಿದ್ದ ಎಮ್ಮೆ ಕರುವಂತೆ ಅರಚುತ್ತಿತ್ತು ಪಾಪ...ಅಪ್ಪನ ಕೋಪ ನೆತ್ತಿಗೇರಿತ್ತು.... ಪಾಪ ಅದು ಮಾತನಾಡುತ್ತೆ, ಹಸಿವಾಗಲ್ವ, ಕೊಳೆ ಆಗತ್ತೆ, ಊರೆಲ್ಲ ಸುತ್ತುತ್ತೆ ಅಪ್ಪ ಚಿಕ್ಕಪ್ಪರ ಜೊತೆ. ನಾವು ಮಾಡಿದ್ದು ತಪ್ಪಲ್ಲ ಅನ್ನಿಸಿತ್ತು... ಹೀಗೆ ಒಂದು ಬಲಿಯೊಂದಿಗೆ ಪ್ರಾರಂಭವಾಯಿತು, ಆಗ ನನಗೆ ೪ ವರ್ಷವೇನೋ... ಬಳಿಕ ಸುಮಾರು ವರ್ಷ ರೇಡಿಯೋ ಬರಿ ...
ಕಸದ ಬುಟ್ಟಿ ಸೇರುವ ಮುನ್ನ...... ಬಹಳ ದಿನಗಳಿಂದ ಯಾಕೋ ನಮ್ಮ ಈ ಸ್ನೇಹ ಪ್ರೀತಿಯಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣಬರುತ್ತಿತ್ತು. ಎಷ್ಟೋ ವರ್ಷಗಳ ಕನಸು ನನಸಾಗುವ ಸಮಯ. ಏನೋ ಭಯ, ಕಾತರ... ಅಣ್ಣನಿಗೆ ಫೋನಾಯಿಸಿದೆ. 'ನಿಂಗೆ ಇಷ್ಟಾನಾ ಪುಟ್ಟಾ ' ಎಂದು ಕೇಳಿದ. 'ಗೊತ್ತಿಲ್ಲಾ' ಎಂದೆ ಪೆಚ್ಚಗೆ. 'ಸರಿ ಹೋಯ್ತು..... ಟೈಮ್ ತಗೋ ,ಯೋಚಿಸು ' ಎಂದು ಫೋನಿಟ್ಟ. ಏನು ಯೋಚಿಸಲಿ .... ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೆ. ಸಹಜವಾಗಿ ಭಾವೊದ್ರಕಕ್ಕೆ ಒಳಗಾಗಿದ್ದೆ. ಪ್ರತಿ ಮೆಸೇಜಿಗೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ. ಆದರೂ ಕಷ್ಟಪಟ್ಟು ನನಗೆ ನಾನೆ ಬೇಲಿ ಹಾಕಿ ಕೊಂಡಿದ್ದೆ. ಅವನಿಗೆ ಬೇಸರ ಪಡಿಸುವ ಉದ್ದೇಶ ನನಗಿರಲಿಲ್ಲ, ಆದ್ದ ಕಾರಣ ತಡೆದಾದರು ಪ್ರತಿಕ್ರಿಯಿಸುತ್ತಿದ್ದೆ. ಅವನು ಬೇರೆ ತನ್ನ ವೃತ್ತಿರಂಗದಲ್ಲಿ ಮುಂದುವರಿಯುತ್ತಿದ್ದ ಸಮಯವದು. ಸಧ್ಯದಲ್ಲೆ ಬಹುಮುಖ್ಯವಾದ ನಿರ್ಧಾರ ತೆಗೆದುಕೊಳ್ಳುವವನಿದ್ದ. ಅದರ ಖುಷಿಗೆ ಅಡ್ದಿಪಡಿಸುವ ಬಯಕೆ ನನಗಿರಲಿಲ್ಲ. ಏಕೆಂದರೆ ಅವನ ಪರಿಶ್ರಮದ ಅರಿವು ನನಗಿತ್ತು. ಒಮ್ಮೆಅವನ ಜೊತೆ ನನ್ನ ಭವಿಷ್ಯವನ್ನು ಕಲ್ಪಿಸಿಕೊಂಡೆ, ನಾನು ನನ್ನ ಕನಸಿನ ಅರಮನೆಯಲ್ಲಿರುವಂತೆ ಭಾಸವಯಿತು. ತುಂಬಿದ ಮನೆ, ಪ್ರೀತಿ ತುಂಬಿದ ಮಾತುಗಳು... ಬಹುಮುಖ್ಯವಾಗಿ ಎಲ್ಲರೂ ಪರಿಚಿತರು. ನಾನೆಂದರೆ ಅಕ್ಕರೆ-ಪ್ರೀತಿ ಎಂಬುದನ್ನ ಅವರ ಕಂಗಳೆ ಹೇಳಿದ್ದವು. ಇನ್ನೇನು ಬೇಕು. ನಾನು ನ...
ನಾಗರ ಪಂಚಮಿ ಎಂದರೆ ಚಿಕ್ಕಂದಿನಲ್ಲಿ ಒಂದು ವಿಧವಾದ ಹುಚ್ಚು. ಅಮ್ಮ ನಾಗರ ಪಂಚಮಿಗೆ ಇಂತಿಷ್ಟು ದಿನ ಇದೆ ಎಂದು ಲೆಕ್ಕ ಹಾಕ ತೊಡಗಿದರೆ, ನಾನು ಮದರಂಗಿ ಗಿಡ ಎಷ್ಟು ಚಿಗುರಿದೆ, ಎಷ್ಟು ಎಲೆ ಸಿಗಬಹುದು ಎಂದು ಲೆಕ್ಕ ಹಾಕುತ್ತಿದ್ದೆ. ಯಾಕೆಂದರೆ ಆ ದಿನ ಮಾತ್ರ ನನಗೆ ಮದರಂಗಿ ಹಚ್ಚಲು ಅಪ್ಪ ಅಮ್ಮನಿಂದ ಅನುಮತಿ ಸಿಗುತ್ತಿದ್ದುದು. ಚಿಕ್ಕವಳಿದ್ದಾಗ ನಾನಗೂ ಮದರಂಗಿಗು ವಿಚಿತ್ರ ಸಂಬಂಧ. ಅದು ಹಚ್ಚಿ ಕೈ ರಂಗೇರುತ್ತಿದ್ದಂತೆ ಜ್ವರದ ತಾಪ ಹೆಚ್ಚುತ್ತಿತ್ತು. ಬಿಡದೆ ಸುರಿವ ಮಳೆಗಾಲ ಕಾರಣವೋ, ಕಾಕತಾಳೀಯವೋ ಅಥವಾ ನಿಜವೋ ಜ್ವರವಂತು ಬರುತ್ತಿತ್ತು. ಅಪ್ಪ 'ಯಾಕೆ ಬೇಡ ಎಂದರು ಹಚ್ಚುವೆ' ಎಂದು ಗದರುತ್ತಿದ್ದರು. ನಾಗರ ಪಂಚಮಿ ದಿನ ನಾನು ಶಾಲೆ ಬಿಟ್ಟು ಬಂದ ತಕ್ಷಣ ಅಮ್ಮ ಎಷ್ಟೊತ್ತಿಗೆ ಮದರಂಗಿ ಅರೆದು ಕೊಡುವಳು ಎಂದು ಕಾಯುತ್ತಿದ್ದೆ. ಅವಳು ಹಾಲು ಕರೆದು ಬರುವಷ್ಟರಲ್ಲಿ ಒಳ್ಳಲ್ಲಿ ಹಾಕಿ ನನ್ನ ಕೈಗೆ ತಾಗದಂತೆ ಬೀಸುವ ಸರ್ಕಸ್ ಮಾಡುತ್ತಿದ್ದೆ. ಅಮ್ಮ ಬೀಸಿಟ್ಟಂತೆ ಅದಕ್ಕೆ ಲಿಂಬು ರಸ ಹಾಕಿ ತಿರುವುತ್ತ ಮಾವ ಇನ್ನೂ ಯಾಕೆ ಬಂದಿಲ್ಲ, ಎಂದು ಬಾಗಿಲು ಕಾಯುತ್ತಿದ್ದೆ. ಅಮ್ಮ, 'ಮಳೆ ಜೋರಾಗಿದೆ, ಬರಲ್ವೇನೊ, ನೀ ಒಳಗೆ ಬಾ, ದೀಪ ಹಚ್ಚು' ಎಂದರೆ ನನಗೆ ಬಲವಾದ ನಂಬಿಕೆ ಮಾವನ ಮೇಲೆ, ಆತ ಒಮ್ಮೆಯೂ ತಪ್ಪಿಸಿದವನಲ್ಲ. ಯಾವಾಗಲೂ ಕತ್ತಲು ಮಾಡಿಕೊಂಡು ಆ ಚಳಿಯಲ್ಲೂ ಬೆವರೊರಿಸುತ್ತ 'ಅಯ್ಯೋ ಗದ್ದೆಗೆ ಹೋಗಿದ್ದಿ, ಹೊತ್ತಾಗಿದ್ದೆ ಗೊತ...
ಎಲ್ಲರಿಗೂ ಒಂದೊಂದು ಚಟ ಇರುತ್ತಂತೆ, ಚಟ ಚಟ್ಟ ಹತ್ತಿಸುತ್ತಂತೆ. ನಂಗೇನು ಮಾಡುತ್ತೊ ಗೊತ್ತಿಲ್ಲ. ತಲೆ ಹೊಕ್ಕ ಕಥೆ ಕವನಗಳು ನವಮಾಸ ತುಂಬಿದ ಗರ್ಭದಂತೆ, ಇಂದು ಸಮಯವಿಲ್ಲ ಎಂದರೆ ಹೇಗೆ ಕೇಳೀತು? (ಅ)ಹಿತವಾದ ನೋವು ಮೈ ಮನದ ತುಂಬ. ದಿನನೋಡಿ ಹೆರುವುದೆ....?? ಮನೆಗೆ ಬಣ್ಣ ಬಡಿಯಲೆಂದು ಎಲ್ಲಾ ಸಾಮಾನುಗಳನ್ನು ಮಾಳಿಗೆಗೆ ಸಾಗಿಸುತ್ತಿದ್ದರು. ಜಾನ್ಹವಿ ಕಪಾಟಿನಲ್ಲಿದ್ದ ಬಟ್ಟೆಯ ಗಂಟು ಎತ್ತಿದಳು, ಬಲು ಭಾರ. ಸ್ವಲ್ಪ ಬಟ್ಟೆ ಸರಿಸಿ ನೋಡಿದಳು, ಅವಳ ಊಹೆ ಸರಿಯಾಗಿತ್ತು. ಅಲ್ಲೆ ನಿಂತು ಗಂಟು ಬಿಚ್ಚ ತೊಡಗಿದಳು. ಅಷ್ಟರಲ್ಲಿ ಬಂದ ಅವಳ ಅಮ್ಮ, 'ಮೊದಲು ಹಿಡಿದ ಕೆಲಸ ಮುಗಿಸು, ಆಮೇಲೆ ಇದೆಲ್ಲಾ ಹರಡಿಕೊಂಡು ಕೂರು. ಪೇಂಟ್ ಮಾಡೋರು ಬಂದ್ರೆ ಸುಮ್ಮನೆ ಕೂರಬೇಕಾ??! ' ಅವಸರವರವಾಗಿ ಹೇಳಿ ಹೋದರು. ಹಾ ನಂಗೂ ಗೊತ್ತು!!! ಇದನ್ನ ನೋಡು ಎಂದು ಕುಣಿಯುತ್ತ ಮಾಳಿಗೆ ಹೋದಳು. 'ಇನ್ನೂ ಹುಡುಗಾಟ, ನಿನ್ನೋರಿಗೆಯವರೆಲ್ಲಾ ಮದುವೆ ಆಗಿ ಮಕ್ಕಳ ಮಾಡಿಕೊಂಡಾಯ್ತು' ಹಲುಬ ತೊಡಗಿದರು. 'ಹುಂ ಮುದಿಕಿನು ಆದ್ರು!! ಏನಿಗ... ನಾ ಹೀಗೆ ಇರೋದು', ಆ ಗಂಟನ್ನ ಮೂಲೆಯಲ್ಲಿರಿಸಿ, 'ಸಂಜೆ ಸಿಗ್ತೀನಿ, ಸಿ ಯಾ ಡಾರ್ಲಿಂಗ್!! ಎಂದು flying kiss ಕೊಟ್ಟು ಹೊರ ಬಂದಳು. ತೋಟದಿಂದ ಬಂದ ಜಾನ್ಹವಿ ತಂದೆ ' ಯಪ್ಪಾ ಏನು ಸೆಕೆ,!!!' ಬೆವರೊರಿಸಿ ಕೊಳ್ಳುತ್ತಾ 'ಮಗಳೆ ಏನಾದ್ರು ಕುಡಿಯೊದಕ್ಕೆ ತಗೊ ಬಾ' ಎಂದರು. 'ಅಮ್ಮ ಮ...
ದೂರ ತೀರದ ಮಹತಿ ಬಸ್ಸಿಳಿದು ರೂಡಿಯಂಂತೆ ಸಾವಿತ್ರಮ್ಮನ ಮನೆಗೆ ಹೋದೆ. ಅದೊಂದು ಅಧ್ಬುತ ಜೀವ. ಅವರ ಈ ವಯಸ್ಸಿನ ಹುರುಪು ನಮಗೆ ನಾಚಿಕೆ ತರಿಸುತ್ತದ್ದೆ. ನಮ್ಮ ಮನೆ ಅವರಿಗೆ ಅಜ್ಜನ ಮನೆಯಾಗಬೇಕಂತೆ. ನಮ್ಮ ಮನೆಯಲ್ಲಿ ನಡೆವ ಪ್ರತಿ ಕಾರ್ಯಕ್ರಮದಲ್ಲು ತಪ್ಪದೆ ಹಾಜರಿರುತ್ತಿದ್ದರು. ಒಂದು ತರ ಸ್ವಂತ ಅಜ್ಜಿಯಂತೆ ನಮಗೆ. ಅಮ್ಮ ಅಪ್ಪನಿಗೂ ಹಾಗೆ, ಅಮ್ಮನಂತೆ. ಯಾವಗಲೂ ಮುಗುಳ್ನಗುತ್ತಾ, ತಾನಾಯಿತು, ತನ್ನ ಕೆಲಸವಾಯಿತು, ಜಪ-ತಪ ಬಿಟ್ಟರೆ ಬೇರೆ ಪ್ರಪಂಚವಿರಲಿಲ್ಲ. ಬಾಗಿಲಲ್ಲಿ ಎತ್ತರದ ನಾಯಿ ಇತ್ತು, ಹೊಸ ಪರಿಚಯ. ಅಷ್ಟರಲ್ಲಿ, ಗಪ್ಪತಿ ಮಾವ, ಬಂದ. 'ಅರೆ!!, ಈಗ ಬಂದೆ? ಆರಾಮ? ಕುಡಿಯಲೆ ಎನು ತಗತ್ತೆ' ಕೇಳಿದ. ನನಗೆ ಅಲ್ಲಿ ಸುಮ್ಮನೆ ತೊಂದರೆ ಕೊಡುವ ಇರಾದೆ ಇರಲಿಲ್ಲ. 'ಸಾವಿತ್ರಮ್ಮ ಎಲ್ಲಿ ಎಂದೆ?' 'ಅದಕ್ಕೆ ಸಮಾ ಆರಮಿಲ್ಲೆ, ಮಲ್ಗಿದ್ದು ಕೋಲಿಲಿ. ಈಗಷ್ಟೆ ಗುಳ್ಗೆ ಕೊಟ್ಟಿ. ತಗ ಮಲ್ಗಿದ್ದು' ಎಂದ. ನನಗೆ ಅವರ ಮುಖ ನೋಡುವ ಹೊರತು ಮತ್ತೇನು ಮನಸ್ಸಿರಲಿಲ್ಲ. ಅವರು ಅಲ್ಲಿಂದಲೆ, 'ತಮ್ಮಾ ಯಾರು' ಎಂದು ಕನವರಿಸಿದರು.'ನಾನು ಅಜ್ಜಿ' ಎನ್ನುತ್ತಾ ಅವರು ಮಲಗಿದ್ದಲ್ಲಿಗೆ ಹೋದೆ. 'ಅಯ್ಯೋ ತಂಗಿ, ಕಣ್ಣ ದ್ರುಷ್ಟಿನೆ ಇಲ್ಯೆ..., ಗೊತ್ತೆ ಆಯ್ದಿಲ್ಲೆ ಸುಳ್ಳಾ...ನೀ ಬಂದು ಮಾತಾಡ್ಸದಂತು ಗೊತ್ತೆ ಆಗ್ತಿಲ್ಲೆ, ದೃಷ್ಟಿ ಪೂರ್ತಿ ಮಂದಾಗೋಯ್ದು, ಆ ಭಗ್ವಂತಾದ್ರು ಎಷ್ಟು ಆಯುಸ್ ಬರ್ದಿಗಿದ್ನನ, ...

Comments
Post a Comment