ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...

 ಸುಪ್ತ ಮನಸಿನ ಕನವರಿಕೆಗಳು 

ಅಮ್ಮ ಇನ್ನೂ ನಾಲ್ಕು ದಿನ ಹಾಯಾಗಿ ಇರಬಹುದು ನೋಡು, ಅಮ್ಮ ಕೊಟ್ಟ ಕಾಫಿ ಹಿಡಿದು ವರಾಂಡದಲ್ಲಿ ಕಾಲು ಚಾಚಿ ಕುಳಿತೆ. 'ಹಾ' ಎನ್ನುತ್ತಾ ಕೆಲಸದಲ್ಲಿ ಮಗ್ನಳಾದಳು. ಅಣ್ಣ, 'ಏನು ಅರಾಮ, ನಿನ್ನ ಮದುವೆ ಇದೆ, ಮರ್ತೋಯ್ತಾ??. ' 'ಹೌದೌದು! ಮದ್ವೆ... ಮಕ್ಕಳಾಗೋದಲ್ವಾ.'
' ಹೆಯ್ not kidding, we are serious!! '
'ಏನು? ನಂಗೆ ಮದ್ವೆನಾ? ಹುಡುಗ ಯಾರು? '
'ಅಪ್ಪಾ ಹತ್ರ ವಿಚಾರಸು'. ' ಸುಮ್ನೆ ಹೇಳೊ, ಯಾಕೆ ತಲೆ ತಿಂತಿಯಾ?'. 'ನಿಜಾ ಅಪ್ಪಂಗೆ ಕೇಳು.ನಂಗೇನು ಗೊತ್ತಿಲ್ಲಾ..' ಅಷ್ಟರಲ್ಲಿ ಅಲ್ಲಿಗೆ ಅಪ್ಪ ಬಂದರು. 'ಅಪ್ಪಾ ಏನಿದೆಲ್ಲಾ? '. ' ನಿನ್ನ ಮದುವೆ ತಯಾರಿ' 'ಎಲ್ಲಾ ಯಾಕೆ ಈ ತರ ಜೋಕ್ ಮಾಡ್ತಿದಿರಾ?' 'ಹುಡುಗಾ ಯಾರು?!! ' 'ಅಣ್ಣ ಫೋಟೋ ತೋರ್ಸೊ' ಎಂದು ಅಪ್ಪ ಬೇರೆಲ್ಲೋ ಹೋದ. ನಂಗೆ ಸಿಟ್ಟು ಬಂತು. ಏನ ಬೇಕಾದ್ರು ಮಾಡ್ಕೋಳ್ಳಿ, ಎಂದು, ಎದ್ದು ಹೋಗಿ ಮಲಗಿದೆ. ಯಾಕೆ ಸುಮ್ಮನೆ ತಲೆ ತಿಂತಾರೊ ಎಲ್ಲಾ..‌ ನಾನಂತು ಮಲಗುವೆ ಎಂದು ಮಲಗಿದೆ. ಅದೆಷ್ಟು ಸುದೀರ್ಘ ನಿದ್ದೆ, ಯಾರು ಎಚ್ಚರಿಸಲು ಇಲ್ಲಾ, ಏನಾಗಿದೆ ಎಲ್ಲರಿಗೂ.. ಊಟಾ ಆಯ್ತು. ನನ್ನ ಫ್ರೆಂಡ್ ಗೆ call ಮಾಡಿದೆ, ನೊ ಸಿಗ್ನಲ್... ' ನಿನ್ನ ಸಾರಿ ಐರನ್ ಮಾಡ್ಕೋ' 'ಯಾವುದು?'. ' ನಿನ್ನ ರೇಷ್ಮೆ ಸೀರೆ ಇದೆಲ್ಲಾ ಅದೆ,' 'ಅದನ್ನಾ'?!! '. 'ಹೌದು ಎಲ್ಲಿ ಹುಡುಗ? ಏನು! ಯಾಕೆ ಯಾರೂ ಸರಿ ಹೇಳ್ತಿಲ್ಲಾ? ನಿಮಗೆಲ್ಲಾ ಏನಾಗಿದೆ? ನಾನಷ್ಟು ಭಾರ ಆದ್ನಾ ನಿಮಗೆ' ' ನಿನ್ನಪ್ಪ ಫಿಕ್ಸ ಮಾಡ್ಸಿದ್ದು, ದೊಡ್ಮನೆ ಕಡೆ ಯಾರೋ. ಮೊನ್ನೆ ಇಲೆಕ್ಷನ್ ಪ್ರಚಾರಕ್ಕೆ ಹೋದವರು, ವಿಚಾರ ತಂದರು, ಹುಡುಗ ವಿದೇಶದಲ್ಲಿ ಇರೋವನು, ಸದ್ಯ ಊರಲ್ಲಿ ಇದಾನೆ, ಮತ್ತೆ ಬರೋದು ಯಾವಾಗ ಗೊತ್ತಿಲ್ಲಾ.. ಅದಕ್ಕೆ ನಾಳೆನೆ ಒಳ್ಳೆ ಮುಹೂರ್ತ ಇದೆ ಅಂದರು, ಹೇಗು ನೀ ಬರ್ತಾ ಇದ್ಯಲ್ಲಾ, ಅದಕ್ಕೆ ಈಗಲೇ ಫಿಕ್ಸ ಮಾಡಿದ್ರು' ' ವಾಹ್ ಸೋ ಗ್ರೇಟ್‌ ಮಮ್ಮಾ!! ಯಾವ ಕಂಟ್ರಿಲಿ ಇರೋದು ಅವನು?'. ' ಯುಎಸ್ ನಲ್ಲಿ ಅಂತೆ' 'ಒಹೋ ಸರಿ, ನಂಗೆ ನಿದ್ದೆ ಬರ್ತಿದೆ' 'ಹಾ, ಬೆಳಗ್ಗೆ ಬೇಗ ಏಳು'. ' ಒಕೆ, ಎಷ್ಟಕ್ಕೆ ಮುಹೂರ್ತ!!?' '೧೧ ಗಂಟೆ' 'ಸರಿ' ಎಂದು ಮಲಗಿದೆ

ಬೆಳಗೆ ಎದ್ದು ಸ್ನಾನ ಮಾಡಿ, ಸೀರೆ ಉಡ ತೊಡಗಿದೆ... 'ಅಮ್ಮ ಈ ಬ್ಲೌಸ್ ಬರ್ತಿಲ್ಲಾ ನಂಗೆ' ' ಮತ್ತೊಂದು ಇದೆಯಲ್ಲಾ ಅದು ಹಾಕ್ಕೊಳೆ' ' ಹು ಸರಿ' ಎಂದು ಮೊಬೈಲ್ ಹಿಡಿದು ಕೂತು. ಗ್ರುಪ್ ಲಿ 'ESCN&KC' ನೋಡಿ ದಸ್ !! ಆಯಿತು... ಅಯ್ಯೋ ಅವಳು ಎಂಗೇಜಮೆಂಟಗೆ ಕರಿಲಿಲ್ಲಾ ಎಂದು ಇಷ್ಟು ಕಾಡ್ತಿದಾರೆ, ನಾ ಇಲ್ಲಿ ನಂಗು ಗೊತ್ತಿಲ್ದೆ ಮದ್ವೆ ಆಗೋದಾ?? No way... 'ಅಮ್ಮಾ ಅದ್ಯಾರೆ ಮೂತಿನು ನೋಡಿಲ್ಲಾ ಅವನತ್ರ ತಾಳಿ ಕಟ್ಟಿಸ್ಕೋಳದಾ!! Chance ಇಲ್ಲಾ... ನೋಡು ನನ್ನ ಮದುವೆ ಹೀಗೆಲ್ಲಾ ಆಗತ್ತಾ?? ನೋಡು ಹೌದು ನಾ ಒಂದು shoppingಕೂಡ ಮಾಡಿಲ್ಲಾ.. ಫ್ರೆಂಡ್ಸ್ ಯಾರಿಗೂ ಹೇಳಿಲ್ಲಾ... ನಾ ಓಡೋಗಿ ಮದುವೆ ಆದ್ರೂ ಇನ್ನೊಂದಿಷ್ಟ ಜನ ಬರ್ತಾರೆ., ಇದೇನು ಮದ್ವೇನಾ?? ನೀಮಗ್ಯಾರಿಗು ನಾ ಸಂಬಂಧ ಇಲ್ವಾ? ಯಾಕೆ ಸುಮ್ನಿದೀರಾ? ನಾ ಓಡಿ ಹೋಗ್ತೀನಿ, ನೀವು ಏನು ಬೇಕಾದರು ಮಾಡ್ಕೊಳ್ಳಿ.. ಅಲ್ಲಾ ನಾ ಏನು ಗೊಂಬೆನಾ? ಒಟ್ಟು ನನ್ನನ್ನ ಇಲ್ಲಿಂದ ಓಡಿಸೋದೆ ಗುರಿನಾ?..' ಎಷ್ಟು ಬಾಯಿ ಬಡಿದು ಕೊಂಡರು ಏನು ಮಾತಾಡುತ್ತಿಲ್ಲಾ. ಅಯ್ಯೋ ಈ ಸಹನಿಗೂ call ಹೋಗ್ತಿಲ್ಲಾ, ಏನು ಮಾಡ್ಲಿ??? 'ಅಣ್ಣಾ ನೀನು ಏನು ಹೇಳ್ತಿಲ್ಲಾ, ನಂಗೊತ್ತು, ನಿಂಗು ನಾ ಭಾರ ಆಗಿದಿನಿ, ನಿಮ್ಮತ್ರ ಹೇಳ್ಕೊಂಡು ಏನು ಆಗತ್ತೆ, ನನ್ನ ದಾರಿ ನಾ ನೋಡ್ಕೋತೀನಿ' ' ನಿನಗೆ ತಿಕ್ಕಲಾ? ನಿನ್ನೆ ಅಷ್ಟೇ ಹಾ ಅಂದೆ, ಈಗ ಏನಾಯ್ತು' ' 'ನಾ ಹು ಅಂದನಾ? ಎಲ್ಲಿ!! ಸುಮ್ಮನೆ ನನ್ನ ಮೂಡ್ ಹಾಳು ಮಾಡಬೇಡ. ಮಾಡಸ್ತೀನಿ ಇರಿ, ಮಂಟಪದಲ್ಲಿ ಎಲ್ಲರಿಗೂ ಪೂರ್ತಿ ಮಾಡ್ತೀನಿ' ' ಮಗ ಅಲ್ಲೆಲ್ಲಾ scene createಮಾಡಬೇಡ.. ನಿನ್ನ ಹೆಸರೆ ಹಾಳಾಗೊದು.. ಅವರು ದೊಡ್ಡ ಮನೆತನ' 'ನಮ್ಮದೇನು ಕಿತ್ತೋದ ಮನೆತನನಾ?!!! ಜೀವನಾನೆ ಎಕ್ಕುಟ್ಟೋವಾಗ ಹೆಸರಂತೆ!! ನಂಗೇನು ಬೇಕಾಗಿಲ್ಲಾ, ಅವರ ದುಡ್ಡು ದೌಲತ್ತು ಅವರಿಗೆ ಇಟ್ಕೋಳಕ್ಕೆ ಹೇಳು.., ನಂಗೆ ಬೇಕಷ್ಟು ನಾ ದುಡ್ಕೋ ಬಲ್ಲೆ, ಇನ್ನೆರಡು ವರ್ಷ ಆಗ್ಲಿ...' ನಾ ಮೊದಲು ದೇವಸ್ಥಾನ ಹೋಗ್ತೀನಿ, ನೀವು ಬನ್ನಿ ಎಂದು, ನನ್ನ ಬ್ಯಾಗ ಹೊತ್ತು ಗಾಡಿಗೆ ಹಾಕಿದೆ. ಅಣ್ಣಾ'car ಲಿ ಹೊಗುವಂತೆ ಪುಟ್ಟಾ' ಎಂದ, ಬೇಡ ಎಂದು ಡ್ರೈವರ್ ಗೆ ಹೊರಡಲು ಹೇಳಿದೆ.
ನಾನು ಹಾಕಿದ್ದ ಒಡವೆ ತೆಗೆದು ಬ್ಯಾಗ ಗೆ ಬಟ್ಟೆ ಸುತ್ತಿ ಇಟ್ಟೆ. ಹೌದು ಎಲ್ಲಿಗೆ ಹೋಗಲಿ, ಅಪ್ಪನ್ನ ಎದುರು ಹಾಕ್ಕೊಂಡರೆ ನನ್ನ ಓದು?? ಎಲ್ಲಿಗೆ ಹೋಗಲಿ, ದೇವಸ್ಥಾನಕ್ಕೆ ಹೋಗಿ ಆ ಫಾರಿನ್ ರಿಟರ್ನ್ ಪೂಜೆ ಮಾಡಿ ಹೋಗಲಾ? ಬೇಡ, ಹೋಗೊ ಮಾರಿ ಮೈಮೇಲೆ ಎಳ್ಕೊಳೊದು ಬೇಡ. ಬಸ್ ನಿಲ್ದಾಣದಲ್ಲೆ ಇಳಿದೆ, ದೇವಸ್ಥಾನದೊರೆಗೆ ಬಿಡುವೆನೆಂದ. ನಾ ಅಲ್ಲೆ ಸಾಕೆಂದು ಇಳಿದು ದೇವಸ್ಥಾನದ ಕಡೆ ಹೆಜ್ಜೆ ಹಾಕಿದೆ. ಗಾಡಿ ಹೋಯಿತು, ಪುಣ್ಯKSRTC bus ಬಂತು. ' ಸಿದ್ದಾಪುರ' ಎಂದೆ. ವಿಚಿತ್ರವಾಗಿ ನೋಡಿದ. ನಾ ನೆಟ್ವರ್ಕ್ ಗೆ ತಡಕಾಡ ತೊಡಗಿದೆ. ಇನ್ನು ಯಾರಿಗೆ ಹೇಳಲಿ, ಹಾಸ್ಟೆಲ್ ಗು ಹೋಗುವ ಹಾಗಿಲ್ಲ... ಬೇರೆsim ತಗೋ ಬೇಕಾ?! ತಥ್ ಇದು ಮೂವಿ ನಾ, ನನ್ನ ಟ್ರಾಕ್ ಮಾಡಕ್ಕೆ.. ಮನೇಲಿ ಅಮ್ಮ ಹೇಗಿರಬಹುದು, ಅಪ್ಪಾ ಏನೆಲ್ಲಾ ಹೇಳುವನೋ, ವಾಪಸ್ ಹೋಗಿ ಬಿಡಲಾ, ಮತ್ಯಾವಗಾದರು ನಾ ಈ ಊರಿಗೆ ಮರಳ ಬಹುದೆ... ದಾರಿಯುದ್ದಕ್ಕೂ ಯೋಚನೆಯೆ.... ವಾಟ್ಸಾಪ್ ಮೆಸೇಜ್ ಬಂತು. ಅಬ್ಬಾ ಸಿಗ್ನಲ್ ಸಿಕ್ಕಿತು. 'ಗುಡ್ ಮಾರ್ನಿಂಗ್ ಮೆಸೇಜ್, ' ಏನೂ ಯೋಚಿಸಲಿಲ್ಲ. Call ಮಾಡಿದೆ. ' 'ಎಲ್ಲಿದಿಯಾ, ಆಫೀಸ್ ಗೆ ರಜೆ ಹಾಕು, ನನ್ನ ಲೈವ್ ಲೋಕೆಶನ ಕಳಸ್ತೀನಿ, ಬೈಕ್ ತಗೋ ಬಾ plz, ಆಮೇಲೆ ಎಲ್ಲಾexplain ಮಾಡ್ತೀನಿ plz ' ಒಂದೇ ಉಸಿರಿಗೆ ಹೇಳಿದೆ. ' ಹಾ ಸರಿ ಎಂದ. ಮನೆಯಿಂದcall ಗಳ ಹಾವಳಿ...ಹೌದು ಮಾದು calling, ಕಟ್ ಮಾಡಿದೆ. ಮತ್ತೆscreen ನೋಡಿದೆ, ೭.೩೦!!! ಅಮ್ಮಾ ನಿಜಾ calling.....ಅಂದರೆ ಇದೆಲ್ಲಾ ಕನಸ!!! ಬೆಳಗ್ಗೆ ಕನಸು ನನಸಾಗುತ್ತದೆ... ಅಮ್ಮಂಗೆ call ಮಾಡಿದೆ, ಇವತ್ತು ಓಡಿ ಹೋದೆ ;-P ಅಂದೆ, ಬೇಕಾ ನಿಂಗೆ, ಬೇರೆ ಏನಾರು ಇದ್ರೆ ಹೇಳು, ಇಲ್ಲಾ ಫೋನ್ ಇಡು ಎಂದಳು. ಯೆಸ್ ಇದು ನಾಲ್ಕನೆ ಬಾರಿ...
ರಾಧೆ...🎶

Comments

Popular posts from this blog