ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
ದೂರ ತೀರದ ಮಹತಿ

ಬಸ್ಸಿಳಿದು ರೂಡಿಯಂಂತೆ ಸಾವಿತ್ರಮ್ಮನ ಮನೆಗೆ ಹೋದೆ. ಅದೊಂದು ಅಧ್ಬುತ ಜೀವ. ಅವರ ಈ ವಯಸ್ಸಿನ ಹುರುಪು ನಮಗೆ ನಾಚಿಕೆ ತರಿಸುತ್ತದ್ದೆ. ನಮ್ಮ ಮನೆ ಅವರಿಗೆ ಅಜ್ಜನ ಮನೆಯಾಗಬೇಕಂತೆ.  ನಮ್ಮ ಮನೆಯಲ್ಲಿ ನಡೆವ ಪ್ರತಿ ಕಾರ್ಯಕ್ರಮದಲ್ಲು ತಪ್ಪದೆ ಹಾಜರಿರುತ್ತಿದ್ದರು. ಒಂದು ತರ ಸ್ವಂತ ಅಜ್ಜಿಯಂತೆ ನಮಗೆ. ಅಮ್ಮ ಅಪ್ಪನಿಗೂ ಹಾಗೆ, ಅಮ್ಮನಂತೆ. ಯಾವಗಲೂ ಮುಗುಳ್ನಗುತ್ತಾ, ತಾನಾಯಿತು, ತನ್ನ ಕೆಲಸವಾಯಿತು, ಜಪ-ತಪ ಬಿಟ್ಟರೆ ಬೇರೆ ಪ್ರಪಂಚವಿರಲಿಲ್ಲ. ಬಾಗಿಲಲ್ಲಿ ಎತ್ತರದ ನಾಯಿ ಇತ್ತು, ಹೊಸ ಪರಿಚಯ. ಅಷ್ಟರಲ್ಲಿ, ಗಪ್ಪತಿ ಮಾವ, ಬಂದ.  'ಅರೆ!!,  ಈಗ ಬಂದೆ? ಆರಾಮ? ಕುಡಿಯಲೆ ಎನು ತಗತ್ತೆ' ಕೇಳಿದ. ನನಗೆ ಅಲ್ಲಿ ಸುಮ್ಮನೆ ತೊಂದರೆ ಕೊಡುವ ಇರಾದೆ ಇರಲಿಲ್ಲ. 'ಸಾವಿತ್ರಮ್ಮ ಎಲ್ಲಿ ಎಂದೆ?' 'ಅದಕ್ಕೆ ಸಮಾ ಆರಮಿಲ್ಲೆ, ಮಲ್ಗಿದ್ದು ಕೋಲಿಲಿ. ಈಗಷ್ಟೆ ಗುಳ್ಗೆ ಕೊಟ್ಟಿ. ತಗ ಮಲ್ಗಿದ್ದು' ಎಂದ. ನನಗೆ ಅವರ ಮುಖ ನೋಡುವ ಹೊರತು ಮತ್ತೇನು ಮನಸ್ಸಿರಲಿಲ್ಲ. ಅವರು ಅಲ್ಲಿಂದಲೆ, 'ತಮ್ಮಾ ಯಾರು' ಎಂದು ಕನವರಿಸಿದರು.'ನಾನು ಅಜ್ಜಿ' ಎನ್ನುತ್ತಾ ಅವರು ಮಲಗಿದ್ದಲ್ಲಿಗೆ ಹೋದೆ. 'ಅಯ್ಯೋ ತಂಗಿ, ಕಣ್ಣ ದ್ರುಷ್ಟಿನೆ ಇಲ್ಯೆ..., ಗೊತ್ತೆ ಆಯ್ದಿಲ್ಲೆ ಸುಳ್ಳಾ...ನೀ ಬಂದು ಮಾತಾಡ್ಸದಂತು ಗೊತ್ತೆ ಆಗ್ತಿಲ್ಲೆ, ದೃಷ್ಟಿ ಪೂರ್ತಿ ಮಂದಾಗೋಯ್ದು, ಆ ಭಗ್ವಂತಾದ್ರು ಎಷ್ಟು ಆಯುಸ್ ಬರ್ದಿಗಿದ್ನನ, ಸ್ವಲ್ಪಾ ಚಳಿ ಜ್ವರ ಶುರು ಆಯ್ದೆ, ಬೆಳಗಿಂದಾ,.. ದನಕ್ಕೆ ಅಕ್ಕಚ್ಚೊಂದು ಕೊಟ್ಟಿ, ಗದ್ದೆ ನೆಟ್ಟಿಗೆ ಬಯಿಂದ್ವೆ, ಹೋಪಲಾಯ್ದಿಲ್ಯೆ....ಚಳಿ ನಡ್ಕಾ... ಶ್ಯಿ... ಬ್ಯಾಡ್ದೆ ಮಗಾ ಹಿಂಗಿದ ಜೀವಾ...' ತಟ್ಟೆಂದು ಎದ್ದು ಕೂತು ಒಂದೆ ಉಸಿರಿಗೆ ಹೇಳಿಕೊಂಡು ಮರುಗಿದರು. ಎದ್ದು ಕೂರಲು ಸಹಾಯ ಮಾಡಿದೆ. 'ಆಸ್ರಿಗೆ ಎಂತಾ ಅಕ್ಕು?? ತಮ್ಮಾ, ತಂಗಿಗೆ ಕುಡ್ಯಲೆ ಮಾಡು, ಮಗಾ ಊಟ ಮಾಡ್ಕ್ಯಂಡೆ ಹೋಗು ಕಾ...' ಎಂದು ನನ್ನ ತಲೆ ಸವರಿದರು. ತುಂಬಾ ಸೋತಂತೆ ಕಾಣುತ್ತಿದ್ದರು. ಎಂತು ಬೇಡ, ಸಕ್ಕರೆ ಕಾಳು ಕೊಡು ಸಾಕು ಎಂದೆ. ಗಪ್ಪತಿ ಮಾವ ಸಕ್ಕರೆ ಡಬ್ಬ ಹಿಡಿದು ಬಂದ. 'ಸಕ್ರೆನಡಾ...! ತಮ್ಮಾ, ಖಷಾಯ ಮಾಡ'ಎಂದು ಗದರಿದರು. ನಾ ಅಲ್ಲೆ ಸನ್ನೆ ಮಾಡಿ ಬೇಡವೆಂದೆ. ನಾ ಕುಡಿದಂತೆ, ಅವರು ತಂದು ಕೊಟ್ಟಂತೆ ನಾಟಕವಾಡಿದರು.  ಗದ್ದೆ ಬದುವಿನಲ್ಲಿ ನಡೆದು ಬರುತ್ತಿರೆ ಎದಿರಿರುವ ಹೊಳೆಯಂತೆ ತುಂಬಿ ಬರುವ ಬಾಲ್ಯದ ನೆನಪುಗಳು. ರೇನ್ ಕೋಟ್ ಮೇಲೆ ಉದ್ದ ದಂಟಿನ ಕೊಡೆ ಹಿಡಿದು ಗಾಳಿಯ ದಿಕ್ಕನ್ನು ನೋಡುತ್ತಾ ಹೂಳು ಎತ್ತಿಹಾಕಿದ ಗದ್ದೆಯ ಬದುವಿನ ಮೇಲೆ ನಡೆಯುವುದು  ಎಂದರೆ ರೇಂಬೊ ಸರ್ಕಸ್ ಮಾಡಿದಂತೆ ಆಗುತ್ತಿತ್ತು. ಜೊತೆಗೆ ತೇಲುವ ತೂಕದ ಪಾಠಿಚೀಲ ನಾ ಮುಂದು, ತಾ ಮುಂದು ಎಂದು ಓಡುವ ತವಕ, ಎಲ್ಲವೂ ಈಗಷ್ಟೆ ರಾಚಿ ಹೋದ ತಂಪು ಗಾಳಿಯಂತೆ ಮನದ ತೆರೆಯಲ್ಲಿ.  ದಿನಗಳು ಹೇಗೆ ಕಳೆದು ಹೋದವೊ, ಎಲ್ಲವೂ ಈಗ ತಾನೆ ಜರುಗಿದಂತೆ, ಹಸಿ ಹಸಿಯಗಿದೆ. ಬೆನ್ನಿಗಿದ್ದ ಒಂದು ಸಣ್ಣ ಬ್ಯಾಗ್ ಕೂಡ ಭಾರ ಎನ್ನಿಸುತ್ತಿತ್ತು. ಒಂದು ಘಟ್ಟ ಹತ್ತಿ ತಿರುವು ದಾಟುವುದರೊಳಗೆ ಬೆವರು ಏದುಸಿರು ಜೋರಗಿತ್ತು. ನಗು ಬಂತು. ದಿನಕ್ಕೆ ಹತ್ತು ಕಿಲೋಮೀಟರ್ ನಡೆದು ಓದಿದ ದಿನಗಳು ಎಲ್ಲಿ, ಈಗ ಹತ್ತು ಮಾರು ನಡೆಯದ ಸ್ತಿತಿ ಬಂತೆ ಎಂದು. ಎದುರು ಕಟ್ಟಿಗೆ ಹೊರೆ ಬರುತ್ತಿದ್ದ ಈರಿ ಪರಿಚಯದ ನಗು ಬೀರಿದಳು. 'ಆರಮನೆ ಅಪಿ, ಯಾವಾಗ ಬಂದೆ? ಎಲ್ಲದಿಯೆ ಈಗ? ಒಬ್ಳೆ ಬಂದೆ, ಅಣ್ಣಾ ಬರ್ಲಾ??' ಎಂಟು ವರ್ಷದ ಹಿಂದೆ ಇದ್ದಂತ ಅಭಿಮಾನ, ಪ್ರೀತಿ  ಈಗಲೂ ಹಾಗೆಯೆ ಇತ್ತು, ಅವಳ ಮುಖದ ಸುಕ್ಕಿನ ಹೊರತಾಗಿ. 'ಹುಮ್, ಆರಾಮ್. ನೀ ಆರಾಮ?.. ಇಗಷ್ಟೆ ಬಸ್ಸಿಗೆ ಬಂದೆ. ಬೆಂಗ್ಳೂರಗೆ ಐದಿನಿ, ಅಣ್ಣಾ ಬರ್ಲಾ, ಚೌತಿ ಹಬ್ಬಕೆ ಬತ್ತನಂತೆ.' ಎಂದು ದೀರ್ಘವಾಗಿ ಉಸಿರೆಳೆದುಕೊಂಡೆ. 'ನಾ ಆರಾಮೆ ಅಪಿ, ಎಷ್ಟಲಾ ದಿನಾ ಆಗಿತ್ತೆ ನೋಡದೆ, !! ನೀ ಅಂತು ದಪ್ಪಾನೆ ಆಗಲಕೆ, ಹಂಗೆ ಐದಿಯೆ...' ಎಂದು ಮುಗುಳ್ನಕ್ಕಳು. 'ಅಮ್ಮಾ ಆರಮ ಐಯ್ದರೆ...? ನೊಡ್ದೆ ಸುಮಾರ್ ದಿನ ಆತು. ಈಗ ಹೆಂಗೆ, ಆರಾಮ ಐಯ್ದರೆ ದಾ...' ಎಂದು ಕಳಕಳಿ ತೋರಿದಳು. ಬಹುಶ್ಃ ಅವಳು ತನ್ನ ತಲೆ ಮೇಲಿದ್ದ ಹೊರೆಯನ್ನು ಮರೆತಂತಿತ್ತು. 'ಹಾ, ಈಗ ಪೂರ್ತಿ ಗುಣಾ ಆಗೈತೆ. ಬಾರೆ ನಮ್ಮನಿಗೆ' ಎಂದು ವಿದಾಯ ಕೋರಿದೆ. ಅವಳ ನಗು, ಮಾತುಗಳು, ಆದ ಸುಸ್ತನ್ನು ಕ್ಷಣ ಕಾಲ ಬದಿಗೊತ್ತಿದವು. ಶಾಲೆಗೆ ಹೋಗುವಾಗ ಅವಳು ಕರೆದು ಸೂಡಿಸುವ ಡೇರೆ ಹೂವಿನ ಪರಿಮಳ ಘಂ ಎಂದು ರಾಚಿದಂತೆ ಆಯಿತು. ಕಮಲಿ ಮನೆಯ ಕಡೆ ನೋಡಿದೆ, ಅವರ ಮನೆಯಂಗಳದಲ್ಲಿ ಮೊದಲಿನಂತೆ ಹೂವಿನ ತೋಟವು ಕಾಣಲಿಲ್ಲ. ಮನುಷ್ಯರ ಸುಳಿದಾಟವು ಕಾಣಲಿಲ್ಲ. ನಾ ಊರು ಬಿಡುವ ಸಮಯದಲ್ಲೆ ಅವಳ ಆರೋಗ್ಯ ಹದ ಗೆಟ್ಟಿತ್ತು. ಮತ್ಯಾವಗಲೊ ಮನೆಗೆ ಬಂದಾಗ ಅವಳ ನಿಧನ ವಾರ್ತೆ ಹೇಳಿದ್ದಳು. ಅಲ್ಲೆ ಗಿಡಗಳ ಮರೆಯಲ್ಲಿ ಅವಳು ಹೂ ಕೊಯ್ದು, ನಗುತ್ತ ಬರುಕಾಯುತ್ತಿರುವಂತೆ ಕಂಡಿತು. 'ಅಪಿ, ನಿಂಗೆ, ಅಮ್ಮಗೆ' ಎಂದು ಬಾಳೆ ಸುತ್ತಿ ಕೊಡುತ್ತಿದ್ದಳು. ದಿನವೂ ಶಾಲೆಗೆ ಹೋಗಿ ಬರುವಾಗ ಒಬ್ಬರಲ್ಲಾ ಒಬ್ಬರು ಹೂ ಮುಡಿಸಿ ಕಳಿಸುತ್ತಿದ್ದರು. ಕೊನೆಗೆ ಅಪ್ಪನಿಗೆ ಹೇಳುವರು, 'ನಿಮ್ಮನೆ ಕೂಸು ಎಲ್ಲರ್ನು ಯಾವಾಗ್ಲು ನಗ್ತಾನೆ ಮಾತಾಡ್ಸಕ್ಯಂಡೆ ಹೊತಿತೆ.' ಹೇಳಿ. ಯಾವಾಗಲು ಮೆಟ್ಟಿಲ ಮೇಲೇ ಕೂತಿರುವ ಕನ್ನಜ್ಜಿ ಕಾಣಲಿಲ್ಲ.
ಹೆಜ್ಜೆ ಹೆಜ್ಜೆಗು ತಳಕಾಡುವ ನೆನಪುಗಳ ಸಾಲು. ಕಮರಿ ಮನೆ ಘಟ್ಟ ಬಂತು, ಪ್ರತಿ ಬಾರಿ ಕನಸಲ್ಲಿ ಈ ಘಟ್ಟದ ಬುಡದಲ್ಲಿ ಮತ್ತು ಜಟಕಿನ ತೋಟದ ತಿರುವಲ್ಲಿ ಹುಲಿ ನಿಂತಿರುವಂತೆ ಕಾಣುತ್ತಿತ್ತು. ಒಬ್ಬಳೆ ಶಾಲೆಗೆ ಹೋಗುವ ಸಂದರ್ಭದಲ್ಲಿ, ಒಮ್ಮೆ ಇಣುಕು ಹಾಕಿ ಓಟಕ್ಕಿಟ್ಟರೆ ಮತ್ತೆ ಮನೆಗಳು ಕಾಣುವ ತನಕ ನಿಲ್ಲುತ್ತಿರಲಿಲ್ಲ. ಈಗ ಆದ ಶಬ್ದ ಎಚ್ಚರಿಸಿತು!! ಭಯದಿಂದ ಆ ಕಡೆ ನೋಡಿದೆ, ಒಹ್!! ಹಸು... ತೋಟದ ಕಂಟ್ನೆಯಿಂದ ರಸ್ತೆಗೆ ನೆಗೆಯಿತು. ದಾರಿಯುದ್ದಕ್ಕೂ ಬದಿಯಲ್ಲಿ ಸಾಗುವ ಹೊಳೆ.  ಈ ಹೊಳೆಗೆ ದೊಡ್ಡ ಪೈಪ್ ಹಾಕಿ ರಸ್ತೆ ಮಾಡಿದ್ದರು, ಆ ಸಲ ಬಂದ ದೊಡ್ಡ ಮಳೆಯ ನೆಗಸು, ಪೈಪ್ ಜೊತೆ ರಸ್ತೆ ಯನ್ನು ಎತ್ತಿಕೊಂಡು ಹೋಗಿತ್ತು.ಮಳೆಗಾಲ ಮುಗಿವ ತನಕ ಸಂಕ ಹಾಕಿ  ಸಂಪರ್ಕ ಒದಗಿಸಿದ್ದರು. ಶಾಲೆಗೆ ಹೋಗಿ ಎಲ್ಲರೊಡನೆ ನಮ್ಮೂರ ರೋಡೆ ಕೊಚ್ಚಿಕೊಂಡು ಹೋಗಿದೆ ಎನ್ನುವಾಗ ನಾನೇ ಮಳಯಬ್ಬರ ಹೆಚ್ಚಿಸಿದ್ದು ನಮ್ಮೂರಲ್ಲಿ ಎಂಬ ಖಷಿ. ಈಗ ಅಂತಹ ಮಳೆಗಳೆ ಇಲ್ಲ. ಅಲ್ಲಿಂದ ಸ್ವಲ್ಪ ದೂರದಲ್ಲಿ ಬೆಚ್ಚೊಕುಳಿ. ಅಲ್ಲಂತು ಮಳೆಗಾಲದ ದಿನದಲ್ಲಿ ಪಚೀತಿಯನ್ನು ಅನುಭವಿಸೆ ತೀರಬೇಕು. ಆ ರಸ್ತೆಯಲ್ಲಿ ಕಾಲಿಟ್ಟ ಕಡೆಯೆಲ್ಲ ಹೂತು ಹೋಗುತ್ತಿತ್ತು. ಎಷ್ಟು ಜನ ಚಪ್ಪಲಿ ಕಳೆದುಕೊಂಡಿದ್ದರು. ಆದರೂ ನಾಟಕ ಮಾಡಲು ಹೋಗಿ ಮೈಯೆಲ್ಲಾ ರಾಡಿ ಮಾಡಿಕೊಂಡಿದ್ದು ನೆನೆದರೆ ನಗು ಬರುತ್ತದೆ. ಎದುರು ಬಂದ ಶಂಕ್ರು ಮಾತಾನಾಡಿಸಿದ. ಏನು ಒಬ್ಳೆ ನಗಕಿಡ್ದೀಯೆ, ಬಸ್ಸಿಗೆ ಬಂದಿಯನು?? ಎಂದ. ಹುಂ ಎಂದು ಮುಗುಳ್ನಕ್ಕು ಮುನ್ನಡೆದೆ.

ನಮ್ಮ ಪಕ್ಕದ ಮನೆಯ ಅತ್ತೆ ಮಾತನಾಡಿದರು, ಅವರ ಮಕ್ಕಳು ಊಟ ಮಾಡಿ ಹೋಗು ಎಂದು ರಸ್ತೆಗೆ ಅಡ್ಡ ಬಂದರು. ಪುನಃ ಬರುವೆ ಎಂದು ಹೊರಡುವಾಗ ಸಾಕಾಯಿತು. ಅಬ್ಬ ನಮ್ಮ ಮನೆ ಬಂತು. ಅಜ್ಜಿ ಹೇಳುತ್ತಿದ್ದರು, ನಮ್ಮ ಮನೆಗೆ ಬಂದ ಗುರುಗಳೂ ಹೇಳಿದ್ದರು, 'ನಿಮ್ಮ ಮನೆ ಶ್ರೀಶೈಲ ಏರಿದಂತೆ 'ಎಂದು. ಅಬ್ಬಾ ಉಸಿರು ತೆಗಿಯಲು ಹರಸಾಹಸ ಪಡುತ್ತಿದ್ದೆ. ಅಬ್ಬಾ ಮನೆ ಬಾಗಿಲು ಕಾಣುತ್ತಿದೆ. ಒಂದು ಪಕ್ಕದಲ್ಲಿ ಒಂದು ಸಣ್ಣ ಜಲಪಾತ, ದೀಪಾವಳಿವರೆಗೂ ನೀರು ಹರಿವುದು. ಇನ್ನೊಂದು ಕಡೆ ಅಡಿಕೆ ತೋಟ. ಸುತ್ತಲೂ ಗೋಡೆ ಕಟ್ಟಿರುವ ಹುಲ್ಲು ಬೇಣ,ಅದಕ್ಕೆ ತಾಗಿ ಹುಟ್ಟಿರುವ ಅರಣ್ಯ. ಕಾಂಕ್ರೀಟ ಕಾಡನ್ನ ನೋಡಿ ದಣಿದಿದ್ದ ಕಣ್ಣಿಗೆ ರಸದೌತಣ. ' ಮನೆಲಿ ಯಾರು ಇಲ್ಯನ್ರೊ' ಎನ್ನುತ್ತ ಒಳಗಡಿ ಇಟ್ಟೆ. ಅಮ್ಮ ಕೈಗೆ ಸಾಂಬಾರ ಬೀಸುತ್ತಿದ್ದ ಕೈಯಲ್ಲೆ ಮುಗುಳ್ನಗುತ್ತ ಬಂದಳು. 'ಅರೆರೆರೆ...  ನೀ ಇನ್ನೂ ಬರ್ದೋದ್ದ ನೋಡಿ ಅಜ್ನ ಮನಿಗೆ ಹೋಗಿ ಬತ್ಯನ ಮತ್ತೆ ಅಂದ್ಕಂಡಿ, ಕುಡ್ಯಲೆ ಎಂತ ಅಕ್ಕು ಮಗಾ..'  ಬಿಗಿದಪ್ಪಿಕೊಂಡಳು. 'ಅಪ್ಪ ಎಲ್ಲಿ, ತ್ವಾಟಕ್ಕೆ ಹೋಯ್ದ್ನ? ಈಗ ಎಂತು ಬೇಡ, ಊಟನೆ ಮಾಡ್ರಾತು' ಎನ್ನುತ್ತಾ ನನ್ನ ಬ್ಯಾಗಿರಿಸಿ, ಕೈ ಕಾಲು ಮುಖ ತೊಳೆಯಲು ಹೋದೆ.
'ಅವು ಇಲ್ಲೆ ಸೊಸೈಟಿಗೆ ಹೋಯ್ದ. ಬರದು ಸಂಜ್ಯಾಕ್ಕು'
'ಒಹೋ, ನಾ ಬರದು ಗೊತ್ತಿತ್ತಿಲ್ಯ, ಇವತ್ತೆ ಹೋಗಕಿತ್ತ..' ಮುಖ ಊದಿಸಿಕೊಂಡೆ. 'ಸಂಜೆ ಹೇಳ ತನಕಾ ಬತ್ವೆ, ನೀ ಬಾ.. ಸ್ವಲ್ಪ ಕುಡ್ಕ, ಇನ್ನೂ ಹುಳಿ ಆಯ್ದಿಲ್ಲೆ, ಇವತ್ತು ಒಂದಾನೊಂದು ಆಳಿಲ್ಲೆ, ಕೊಟ್ಗೆ ಕಲಸ ಮುಗಸಿ, ತೋಟದ ಕಡಿಗೆ ಒಂದ ಸಲಾ ಹೋಗಿ ಬಪ್ಪರೊತಿಗೆ ಟೈಮ್ ಆಗೋತಪಾ, ಮಾಡಿಹೊದ್ದು ಪಾಲಗೆ ಕೊಳೆ ಬಯಿಂದು ಹೇಳಿ ಉಮೇಶಾ ಹೇಳ್ದ, ನೋಡನ ಹೇಳಿ ಹೋಗಿದ್ದಿ.'
ಕೊಳೆ ಬಯಿಂದಾ ನಮ್ಮನೆ ತೋಟದಲ್ಲಿ?'
'ಇಲ್ಲೆ, ಆಚೆ ಮನೆ ತೋಟದಲ್ಲಿ ತೆಳುಕೆ ಬಯಿಂದು, ಅದೆ ಇಚಿಗೆ ಬಿದ್ದಿತ್ತಕು' ಅಮ್ಮ ಸಾಂಬಾರು ಕುದಿಯಲಿಟ್ಟು ನನ್ನ ಜೊತೆ ಕೂತರು. 'ಇದ್ಯಾವಂಗಿನೆ, ನೋಡಿದ್ನೆ ಇಲ್ಲೆ, ಈ ಕಲರ್ ಚೊಲೊ ಕಾಣ್ತು' ಹಳೆದೆಯೆ, ನೀ ನೋಡಿದ್ದಿಲ್ಯಾಗಿತ್ತನ.. ಈ ಸಲನು ಆಚೆ ಮನೆವು ಒಂದೆ ಸಲ ಮದ್ದೊಡ್ಸಿದ್ದ?'
'ಹು... ಅವ ಹಲ್ಬಕ್ಯೋತಿದ್ನಡೆ, ತಮ್ಮಲ್ಲಿ ಒಂದೆ ಸಲ ಮದ್ದೊಡ್ದು, ಕೊಳೆ ಬಯಿಂದು ಹೇಳಿ'. ' ಶಿ ಇಂತವ್ಕೆ ಎಂತಾ ಹೇಳ್ತ??!! ಮತ್ತೆ ಊರ ಬದಿಗೆ ಏನ ಸುದ್ದಿ... ಮಳೆಗಾಲ ಅನಿಸ್ತಾನೆ ಇಲ್ಲೆ ಅದಾ..'
ಹು ಈ ವರ್ಷಿಟ್ಟಡಿನೂ ಎಲ್ಲಾ ಕಾಲ.. ಏನಾಗೋಯ್ದನಪಾ... ಅಡಕೆ ಈಗ್ಲೆ ಸುಮಾರು ಬೆಳದೋತು ಹೇಳಿ'
ರಾಧೆ...🎶

ಮುಂದುವರಿಯುವುದು...

Comments

Popular posts from this blog