ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...
                                                            ದಿನಕ್ಕೊಂದು ಕಥೆ
ನಾನು  ಹಾಗೆ ಸುಮ್ಮನೆ  ಕುಳಿತಿದ್ದೆ. ಮೇಜಿನ ಮೇಲಿದ್ದ ಪತ್ರಕೆಯಲ್ಲಿ ಪ್ರಕಟವಾದ ಕತೆಯ ಶೀರ್ಷಿಕೆ ಗಮನ ಸೆಳೆಯಿತು 'ಹೀಗೊಂದು ಕಥೆ'. ಎತ್ತಿಕೊಂಡೆ, ಅದರಲ್ಲಿ ಇದ್ದಿದ್ದು ಇಷ್ಟೆ; ಕತೆಗಾರ ಕುರ್ಚಿಯ ಮೇಲೆ  ಕುಳಿತು ಬರೆಯುತ್ತಿದ್ದ. ವಿಪರೀತ ಬಾಯಾರಿಕೆ ಉಂಟಾಯಿತು. ಅಲ್ಲಿಯೇ ಇದ್ದ ಬಾಟಲಿ ಎತ್ತಿಕೊಂಡ, ಕ್ಷಣ ಮಾತ್ರದಲ್ಲಿ ನೀರು ಖಾಲಿಯಾಯಿತೇ ವಿನಃ ಬಾಯಾರಿಕೆ ನೀಗಲಿಲ್ಲ. ಅಲ್ಲೆ ಪಕ್ಕದ ಟೀಪಾಯಿಯ ಮೇಲಿದ್ದ ಹೂಜಿಯನ್ನು ತಡವುತ್ತ ಎತ್ತಿದ. ಅದೂ ಖಾಲಿಯಾಯಿತು. ಆದರೆ ದಾಹ ನೀಗಿರಲಿಲ್ಲ...ಅಡುಗೆ ಮನೆಗೆ ಹೋಗಿ ಬೆಲ್ಲ- ನೀರು ಕುಡಿದರೆ ಸರಿಹೋಗುವುದು ಎಂದುಕೊಂಡ.  ಆದರೆ ಏಳಲು ಮನಸಾಗದೆ ಅಲ್ಲೆ ಚಡಪಡಿಸುತ್ತಿದ್ದ. ಕತೆ ಮುಗಿದಿತ್ತು. ಅರೆ ಏನು ಬರೆಯುತ್ತಾರೆ,  ಅದು ಹೇಗೆ ನಂಬುತ್ತಾರೆ ಏನು ಬರೆದರು ಓದುತ್ತಾರೆಂದು??.ಒಮ್ಮೆ ನಮ್ಮ ಗುರುಗಳು ಹೇಳಿದ್ದು ನೆನಪಾಯಿತು, ಇಂಥ ಕಥೆಗಳು ಬೇರೆ ಏನೊ ತಿರುಳನ್ನು ಹೊತ್ತು ತರುವವು ಎಂದು. ಇರಬಹುದೇನೊ ...ಎನ್ನುತ್ತಾ ಪತ್ರಿಕೆ ಮಡಿಚಿಟ್ಟೆ.

ರಾಧೆ....🎶

Comments

Popular posts from this blog