ಬರವಣಿಗೆ, ಒಂದು ಸುಂದರ ಅನುಭವ. ವರ್ಷಗಳೇ ಕಳೆದು ಹೋಗಿತ್ತು, ಮನಸ್ಸಿಟ್ಟು ಬರೆಯದೆ. ನನಗೆ ಬರವಣಿಗೆಯ ಜೊತೆ ಒಂದಿಷ್ಟು ಒಳ ಒಪ್ಪಂದ ಇದೆ. ಯಾವುದೇ ರೀತಿಯ ಹೊರ ಪ್ರಪಂಚದ ಪ್ರಭಾವ ಬೀರದೆ, ಬಹುಮುಖ್ಯವಾಗಿ ಸಾಮಾಜಿಕ ಜಾಲತಾಣ, ಸಿನಿಮಾ, ಯಾರೋ ಬರೆದ ಸಾಲುಗಳು... ಹಾಗಂತ ಮುಖತಃವಾಗಿ ಪರಿಚಯವಾದ ಪ್ರತಿಯೊಂದು ವ್ಯಕ್ತಿ, ಜೀವಿ, ವಸ್ತು, ಸಂಗತಿಗಳಲ್ಲಿ ಜೀವಿಸ ಬಯಸುತ್ತೇನೆ. ಬಹುಶಃ ನಾವು ಜೀವನ ಪೂರ್ತಿ ಯಾವುದೋ ಸಂಕೋಲೆಯ ಸಂತೆಯಲ್ಲಿ ಕಳೆದುಹೋದ ನಮ್ಮನ್ನು ಹುಡುಕುತ್ತಿರುತ್ತೇವೆ. ಅನುಭವದಿಂದ ಮಾಗಿದ ಮನಸ್ಸಿಗೆ ಆ ಹಳೆಯ ನಾವು ಕಂಡರೂ ಕಾಣದಂತೆ ಮಾಡಿ ಹೊಸ ಅಂಗಿ ತೊಟ್ಟ ನಮ್ಮನ್ನೇ ಅಪ್ಪಿಕೊಳ್ಳುವುದು, ಆದರೆ ಹುಡುಕಾಟ ನಿರಂತರ. ಬಹುಶಃ ಈ ಲೌಕಿಕ ಜಗತ್ತಿನಲ್ಲಿ ಇರುವಾಗ, ಇದಕ್ಕೂ ಆಳಕ್ಕಿಳಿದರೆ ಅಪಾಯವೇ ಸರಿ. ನಾನು ಭಗವದ್ಗೀತೆಯಲ್ಲಿ ನಂಬಿದ ಸಾಲುಗಳೆಂದರೆ ನಮಗೆ ಸೇರಬೇಕಾಗಿದ್ದು ನಮಗೆ ಸೇರಿಯೇ ತೀರುವುದು. ಪ್ರಯತ್ನ ಇರಬೇಕು ಅಷ್ಟೇ. ಇದ್ದ ಕೆಲಸ ಬಿಟ್ಟಿದ್ದೆ, ಮುಂದೆ ಏನು ಎಂಬ ಚಿಂತೆ ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೊರಟಿದ್ದೆ. ಹೊರಟ ಪಯಣ ಸುಲಭವಿರಲಿಲ್ಲ. ಬಹಳ ದಿನಗಳ ನಂತರ ತಿರುಗಲು ಹೊರಟಿದ್ದೆ. ಕೊನೆಯ ಕ್ಷಣದಲ್ಲಿ ಆದ ಬದಲಾವಣೆಯಿಂದ ಮನೆಯಿಂದ ಹೊರ ಬೀಳಲು ಮನಸ್ಸಿರಲಿಲ್ಲ. ಪ್ರತಿ ಬಾರಿ ನನ್ನ ಸ್ನೇಹಿತರ ಗುಂಪು ಪ್ರವಾಸದ ಬಗ್ಗೆ ಹೇಳಿದಾಗ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವೆ ಎಂಬ ಅಪವಾದ ನನ್ನ ಮೇಲಿತ್ತು. ಈ ಬಾರಿ ಏನು ಯೋಚಿಸ...



ಹೀಗೊಂದು ಯೋಚನೆ   
ನಿನ್ನೆ ಬಸ್ಸಲ್ಲಿ ಕೂತಿದ್ದೆ, ಹೊರಗೆ ಮಳೆ ಜಿಟಿ ಜಿಟಿ ಸುರಿಯುತ್ತಿತ್ತು. ಮಳೆಗಾಲದ ಸಮಯದಲ್ಲಿ ಕಿಟಕಿ ಪಕ್ಕ ಕೂರುವುದೆಂದರೆ ಏನೋ ಅಲರ್ಜಿ, ಅದಕ್ಕೆ ಬಳಿಕ ಬಂದವಳಿಗೆ ಕಿಟಕಿಯ ಬಳಿ ಬಿಟ್ಟು ನಾ ಆರಾಮವಾಗಿ ಕುಳಿತೆ. ಕಿಟಕಿಯ ಗಾಜು ತೆರದಿದ್ದ ಕಾರಣ ಮಳೆಯ ಜುಮುರು ಮುಖಕ್ಕೆ ರಾಚುತ್ತಿತ್ತು. ಒಮ್ಮೆ ಎದ್ದು ಮುಚ್ಚುವ ಮನಸಾಯಿತು. ಆದರೆ ಕೆಲವೇ ಕ್ಷಣಕ್ಕೆ ನಾ ತಲುಪುವ ಜಾಗ ಬರಲಿದ್ದ ಕಾರಣ ಹಾಗೇ ಕುಳಿತೆ. ಅಲ್ಲಿ ತಲುಪುವ ತನಕವೂ ಇವಳು ಯಾಕೆ ಹಾಕುತ್ತಿಲ್ಲ, ಮುಂದೆ ಪ್ರಯಾಣಿಸ ಬೇಕಿರುವುದು ಇವಳೇ ಅಲ್ಲವೇ, ಬೇಕಿದ್ದರೆ ಹಾಕಿಕೊಳ್ಳಲಿ, ಎಂದುಕೊಂಡು ಚಡಪಡಿಸುತ್ತ ಕೂತಿದ್ದೆ. ಏನೋ ಬೇಡವೆಂದರು ಅದರ ಬಗೆಗೆ ಗಮನ... ಅಷ್ಟರಲ್ಲಿ ನಾ ಬಸ್ಸಿಳಿವ ಜಾಗ ಬಂತು. ಮತ್ತೊಂದು ಬಸ್ಸನ್ನು ಏರಿದೆ. ಕೂರಲು ಜಾಗವಿರಲಿಲ್ಲ, ಹಾಗೆ ತೂಗಾಡುತ್ತಾ ಸಾಗಿತ್ತು ಪಯಣ. ಹತ್ತು-ಹದಿನೈದು ನಿಮಿಷಗಳ ಬಳಿಕ ಯಾರೊ ಇಳಿದರು, ಅಂತೂ ಕೂತೆ. ಅಬ್ಬ!! ಎಂದು ಉಸಿರುಬಿಟ್ಟೆ, ಯಾಕೋ ಚಾಲಕ ಜಟಕಾ ಬಂಡಿ ತರ ಬಸ್ಸನ್ನ ಓಡಿಸುತ್ತಿದ್ದ. ಅಷ್ಟರಲ್ಲಿ ಒಬ್ಬ ಅರವತ್ತರ ಆಸುಪಾಸಿನ ಹೆಂಗಸು ಬಸ್ಸನ್ನೇರಿದರು. ಮುಖ ದಣಿದಂತೆ ಇತ್ತು, ಕೂತ್ಕೊಳಿ ಎಂದು, ನಾನು ಎದ್ದೆ. ಕೂರುವಾಗ ಅವರು ಬೇಡವೆಂದರು ನನ್ನ ಕೈಲಿದ್ದ ಚೀಲವನ್ನ ಹಿಡಿದುಕೊಂಡರು, ಧನ್ಯವಾದ ಅರ್ಪಿಸಿದರು. ಬಳಿಕ ಆಂಟಿ ಒಬ್ಬರು ಕೆಮ್ಮುತ್ತದ್ದರು, ನೀರು ಕೊಡಲು ಏನೋ ಹಿಂಜರಿತ, ಸ್ವಲ್ಪ ಹೊತ್ತು ನೋಡಿದೆ, ಆದರೂ ಅವರ ಕಮ್ಮು ನಿಲ್ಲಲಿಲ್ಲ. ಏನಾದರಾಗಲಿ ಎಂದು, ನೀರು ಕೊಡ್ಲಾ ಎಂದು, ನೀರು ಬಾಟಲಿ ಕೊಟ್ಟೆ, ಅವರ ಮುಖದಲ್ಲಿ ಖುಷಿ ಚಿಮ್ಮಿತು. ಇಲ್ಲಿ ನಾ ಮಾಡಿದ ಸಮಾಜ ಸೇವೆ ಹೇಳಲು ಬರೆದಿದ್ದಲ್ಲ. ನಮ್ಮ ಖುಷಿಗೆ ದೊಡ್ಡ ದೊಡ್ಡ ಸಾಧನೆ ಮಾಡಬೇಕೆಂದಿಲ್ಲ. ಒಂದರ್ಥದಲ್ಲಿ ಮಾಡಿದ ಸಾಧನೆ ಹಿಡಿದು ವರ್ಷಕಾಲ ಬೀಗಲಾರದು. ಆದರೆ ಇಂಥ ಚಿಕ್ಕ ಪುಟ್ಟ ಖುಷಿಗಳು ದಿನವನ್ನು ಖುಷಿಯಾಗಿಡುವುದು. ಅಲ್ಲಿ ಸಿಗುವ ಸಂತೋಷವನ್ನ ಏನಕ್ಕೂ ಹೋಲಿಸಲಾಗದು. ಒಳ್ಳೆಯದನ್ನು ಮಾಡಿದಾಗ ಇತರರಿಗಂತ ನಮಗೇ ಲಾಭ ಹೆಚ್ಚು ಎಂದಾದರೆ ಕೈಲಾದ ಸಹಾಯ ಮಾಡುವುದರಲ್ಲಿ ತಪ್ಪಿಲ್ಲ. ಎಷ್ಟೋ ಸಲ ಮಾಡಲೊ ಬಿಡಲೊ ಎಂಬ ಗೊಂದಲದಲ್ಲೆ ಕಳೆದುಬಿಡುತ್ತೇವೆ. ಆ ಒಂದು ಕ್ಷಣ ತಪ್ಪದಿರಲಿ, ಎಲ್ಲರ ಬಾಳಲ್ಲಿ.
ರಾಧೆ... 

Comments

Popular posts from this blog